ಮನೆಕೆಲಸದಾಕೆಯಿಂದ ನಗನಗದು ಕಳವು ಆರೋಪ : ದೂರು
ಕುಂದಾಪುರ, ಜು.1: ಮನೆಯ ಕಾಪಾಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ಮನೆ ಕೆಲಸದಾಕೆಯೇ ಕಳವು ಮಾಡಿದ್ದಾಳೆ ಎನ್ನಲಾದ ಘಟನೆ ಕುಂದಾಪುರ ಸಮೀಪದ ಹಂಗಳೂರು ಎಂಬಲ್ಲಿ ನಡೆದಿದೆ.
ಹಂಗಳೂರು ನಿವಾಸಿ ಭಾಗೀರಥಿ ಜಿ.ರಾವ್ ಎಂಬವರ ಮನೆಯ ಕಾಪಾಟಿ ನಲ್ಲಿ ಇಟ್ಟಿದ್ದ ಚಿನ್ನಾಭರಣ ಹಾಗೂ ನಗದು ಜೂ.27ರಂದು ಕಳವಾಗಿತ್ತು. ಈ ಬಗ್ಗೆ ಜೂ.30ರಂದು ಬೆಳಗ್ಗೆ ಮನೆಯ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ನೋಡಿದಾಗ ಮನೆ ಕೆಲಸ ಶರಾವತಿ ಎಂಬಾಕೆ ಕಳವು ಮಾಡಿರುವುದು ಕಂಡು ಬಂದಿದೆ ಎಂದು ದೂರಲಾಗಿದೆ.
ಈಕೆ ಗೋಡ್ರೇಜಿನಿಂದ 35,000 ರೂ. ನಗದು ಹಾಗೂ 1,25,000 ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾಳೆ. ಈಕೆ ಜೂ.27ರಂದು ಸಂಜೆ ಮನೆ ಕೆಲಸದಿಂದ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





