ಮಸೀದಿಯಲ್ಲಿ ಪ್ರಾರ್ಥನೆಗೆ ಅನುಮತಿ ನೀಡಲು ಸಮಸ್ತದಿಂದ ಮನವಿ
ಮಂಗಳೂರು, ಜು.1: ಕೋವಿಡ್ ವ್ಯಾಪಿಸುವುದನ್ನು ತಡೆಗಟ್ಟಲು ಸರಕಾರ ಘೋಷಿಸಿದ್ದ ಲಾಕ್ಡೌನ್ ಈಗ ಸಡಿಲಿಕೆಯಾಗಿದ್ದು, ಮಸೀದಿಯಲ್ಲಿ ನಡೆಯುವ ಶುಕ್ರವಾರ ಮಧ್ಯಾಹ್ನದ ಜುಮಾ ನಮಾಜ್ ಸಹಿತ ದಿನದ ಐದು ಹೊತ್ತು ಪ್ರಾರ್ಥನೆಗೆ ಅವಕಾಶ ನೀಡಬೇಕೆಂದು ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಕರ್ನಾಟಕ ಮುಶಾವರ ಸಮಿತಿಯು ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಇದೀಗ ರಾಜ್ಯಾದ್ಯಂತ ಲಾಕ್ಡೌನ್ ಬಹುತೇಕ ಸಡಿಲಿಕೆ ಮಾಡಲ್ಪಟ್ಟಿದ್ದು, ವ್ಯಾಪಾರ ಕೇಂದ್ರಗಳು, ಕಚೇರಿಗಳು, ಸಾರಿಗೆ ವ್ಯವಸ್ಥೆಗಳು ಮುಂತಾ ದುವುಗಳನ್ನು ಸಾರ್ವಜನಿಕರಿಗಾಗಿ ತೆರೆಯಲ್ಪಟ್ಟಿದೆ. ಶುಚಿತ್ವ ಮತ್ತು ಅಂತರ ಕಾಪಾಡಿಕೊಂಡು ಸರಕಾರ ನಿರ್ದೇಶಿಸಿದ ನಿಬಂಧನೆಗಳನ್ನು ಪಾಲಿಸಲಾಗುವುದು. ಜುಮಾ ಹಾಗೂ ಇತರ ಐದು ಹೊತ್ತು ಪ್ರಾರ್ಥನೆ ನಿರ್ವಹಿಸಲು ಅನುಮತಿ ನೀಡಬೇಕೆಂದು ಸರಕಾರವನ್ನು ಸಮಸ್ತ ಒತ್ತಾಯಿಸಿರುವುದಾಗಿ ಸಮಸ್ತ ಕೇಂದ್ರ ಮುಶಾವರದ ಸದಸ್ಯರೂ ಕರ್ನಾಟಕ ಮುಶಾವರದ ಪ್ರಧಾನ ಕಾರ್ಯದರ್ಶಿಯೂ ಆದ ಖಾಝಿ ಬಿ.ಕೆ. ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story