ಶಿವಮೊಗ್ಗ: ಬಸ್ ತಂಗುದಾಣದಲ್ಲಿ ನಿರ್ಗತಿಕ ಮಹಿಳೆಯ ಕೊಲೆ
ಶಿವಮೊಗ್ಗ, ಜು.2: ಬಸ್ ತಂಗುದಾಣದಲ್ಲಿ ಮಹಿಳೆಯೊಬ್ಬರ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಲತಾ ಎಂದು ಗುರುತಿಸಲಾಗಿದೆ. ನಿರ್ಗತಿಕಳಾಗಿದ್ದ ಈಕೆ ಎನ್.ಟಿ ರಸ್ತೆಯಲ್ಲಿರುವ ಲೋಕಾಯುಕ್ತ ಕಛೇರಿ ಬಳಿ ಬಸ್ ನಿಲ್ದಾಣದ ಬಳಿ ಇದ್ದರು. ಮಲಗಿದ್ದಾಗ ಲತಾಳ ತಲೆ ಮೇಲೆ ಸಿಮೆಂಟ್ ಸ್ಲಾಬ್ ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಈ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story