ಅನಾಥವಾಗಿದ್ದ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ 'ಟೀಂ ಬಿ ಹ್ಯೂಮನ್'
![ಅನಾಥವಾಗಿದ್ದ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ ಟೀಂ ಬಿ ಹ್ಯೂಮನ್ ಅನಾಥವಾಗಿದ್ದ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ ಟೀಂ ಬಿ ಹ್ಯೂಮನ್](https://www.varthabharati.in/sites/default/files/images/articles/2021/07/5/297229-1625484509.jpg)
ಮಂಗಳೂರು: ಸುಮಾರು 65 ವರ್ಷ ಪ್ರಾಯದ ವ್ಯಕ್ತಿಯೊಬ್ಬರ ಮೃತದೇಹ ಅನಾಥವಾಗಿರುವ ಬಗ್ಗೆ ಪಾಂಡೇಶ್ವರ ಪೊಲೀಸರು ಟೀಂ ಬಿ ಹ್ಯೂಮನ್ ತಂಡಕ್ಕೆ ಮಾಹಿತಿ ನೀಡಿದ್ದು, ತಕ್ಷಣ ಸ್ಪಂದಿಸಿದ ಟೀಂ ಬಿ ಹ್ಯೂಮನ್ ತಂಡ ಮೃತರು ಈ ಮೊದಲು ತಮ್ಮ ಸಂಸ್ಥೆಯ ಸೇವೆ ಪಡೆದುಕೊಂಡಿದ್ದ ಕೇರಳ ತಲಶೇರಿಯ ಬಾಲನ್ ಎಂದು ತಿಳಿಸಿತು.
ಬಾಲನ್ ಅವರ ಮೃತ ದೇಹವನ್ನು ಟೀಂ ಬಿ ಹ್ಯೂಮನ್ ಪೋಸ್ಟ್ ಮಾರ್ಟಂಗೆ ಕಳುಹಿಸಿ, ನಂತರ ತಲಶೇರಿಗೆ ಆ್ಯಂಬುಲೆನ್ಸ್ ಮೂಲಕ ಕಳುಹಿಸಿ ಕೊಟ್ಟಿರುವುದಾಗಿ ತಿಳಿಸಿದ್ದಾರೆ.
Next Story