ಕಾಂಗ್ರೆಸ್ ಸಹಾಯ ಹಸ್ತ ಸಮಿತಿ ಸಭೆ
![ಕಾಂಗ್ರೆಸ್ ಸಹಾಯ ಹಸ್ತ ಸಮಿತಿ ಸಭೆ ಕಾಂಗ್ರೆಸ್ ಸಹಾಯ ಹಸ್ತ ಸಮಿತಿ ಸಭೆ](https://www.varthabharati.in/sites/default/files/images/articles/2021/07/4/297479-1625416008.jpg)
ಮಂಗಳೂರು, ಜು.4: ದ.ಕ. ಜಿಲ್ಲಾ ಕಾಂಗ್ರೆಸ್ ಸಹಾಯ ಹಸ್ತ ಸಮಿತಿಯ ಸಭೆಯು ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ರವಿವಾರ ನಡೆಯಿತು.
ಸಹಾಯ ಹಸ್ತ ಸಮಿತಿ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಈ ತಿಂಗಳ ಕೊನೆಯ ಅವಧಿಯೊಳಗೆ ಪ್ರತೀ ವಿಧಾನಸಭೆಯ ಬೂತ್ ಮಟ್ಟದಲ್ಲಿ ಬೂತ್ಗೆ ಎರಡು ಅಥವಾ ಮೂವರ ಸಲಹಾ ಸಮಿತಿಯ ಸಂಯೋಜಕರನ್ನು ನೇಮಕ ಮಾಡಬೇಕು. ಬೂತ್ ಮಟ್ಟದಲ್ಲಿರುವ ಪ್ರತಿಯೊಂದು ಮನೆಗೂ ಈ ಸಂಯೋಜಕರು ಭೇಟಿ ನೀಡಿ ಬೂತ್ ಗೆ ಒಳಪಟ್ಟ ಯಾವ ಮನೆಗಳಲ್ಲಿ ಕೋವಿಡ್ ರೋಗಕ್ಕೆ ತುತ್ತಾಗಿ ಚೇತರಿಸಿಕೊಂಡವರು ಮತ್ತು ನಿಧನ ಹೊಂದಿದವರ ಬಗ್ಗೆ ಸಮರ್ಪಕ ಮಾಹಿತಿ ಸಂಗ್ರಹಿಸಲು ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಿಧಾನಸಭಾ ಸದಸ್ಯ ಕೆ.ಹರೀಶ್ ಕುಮಾರ್ ವಹಿಸಿದ್ದರು.
ಸಭೆಯಲ್ಲಿ ಶಾಸಕ ಯು.ಟಿ. ಖಾದರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಮೊಯ್ದೀನ್ ಬಾವಾ, ಶಕುಂತಲಾ ಶೆಟ್ಟಿ, ಐವನ್ ಡಿಸೋಜ, ಜೆ.ಆರ್.ಲೋಬೊ, ಲೋಕಸಭಾ ಅಭ್ಯರ್ಥಿ ಮಿಥುನ್ ರೈ, ಜಿಲ್ಲಾ ಸಂಯೋಜಕ ಸದಾಸಿವ್ ಉಳ್ಳಾಲ್, ಸಹಸಂಯೋಜಕರಾದ ವಿಶ್ವಾಸ್ಕುಮಾರ್ ದಾಸ್, ಶೋಭಾ ಕೇಶವ್, ಶಾಲೆಟ್ ಪಿಂಟೊ, ಸವಾದ್ ಸುಳ್ಯ, ವಿಧಾನಸಭಾ ಸಂಯೋಜಕರಾದ ರಮಾನಂದ ಪೂಜಾರಿ, ಶಾಹುಲ್ ಹಮೀದ್ ಕೆ.ಕೆ., ಶಬ್ಬೀರ್ ಎಸ್., ಅಭಿಷೇಕ್ ಉಳ್ಳಾಲ್, ಎಂ.ಪಿ. ಮನುರಾಜ್, ಟಿ.ಕೆ. ಸುಧೀರ್, ಲಾರೆನ್ಸ್ ಡಿಸೋಜ, ಬ್ಲಾಕ್ ಅಧ್ಯಕ್ಷರು, ಮುಂಚೂಣಿ ಘಟಕದ ಜಿಲ್ಲಾಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.