Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ4 July 2021 6:40 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಓ ಮೆಣಸೇ...

ಶ್ರೀರಾಮ ಮಾಡಿದ ರೀತಿಯಲ್ಲಿಯೇ ಅಯೋಧ್ಯೆಯನ್ನು ಅಭಿವೃದ್ಧಿ ಪಡಿಸಲು ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿದ್ದೇನೆ - ನರೇಂದ್ರ ಮೋದಿ, ಪ್ರಧಾನಿ
ಸದ್ಯ ಅಲ್ಲಿರುವ ರಾವಣ ಇನ್ನೊಬ್ಬ ರಾವಣನ ಮಾತನ್ನು ಕೇಳಿಸಿಕೊಳ್ಳುತ್ತಾನೆಯೇ?


ನಾನು ಕೂಡಾ ರೈತನ ಮಗ, ನನಗೂ ಬೇಸಾಯ, ಕೃಷಿ ಮಾಡಿ, ಎತ್ತು ಕಟ್ಟಿ, ಉಳುಮೆ ಮಾಡಿ ಅನುಭವ ಇದೆ - ಬಿ.ಸಿ.ಪಾಟೀಲ್, ಸಚಿವ
ಅದನ್ನೇ ಮುಂದುವರಿಸಿದ್ದರೆ ಸಮಾಜ ಸುರಕ್ಷಿತವಾಗಿರುತ್ತಿತ್ತು.


ಹೆಚ್ಚು ಮಾತನಾಡದಂತೆ ಹಿರಿಯರು ನನಗೆ ಸ್ವಲ್ಪ ಖಾರವಾಗಿಯೇ ಹೇಳಿದ್ದಾರೆ. ಹಾಗಾಗಿ ಮುಂದಿನ 8-10 ದಿನ ಮಾಧ್ಯಮದವರ ಜೊತೆ ಮಾತನಾಡುವುದಿಲ್ಲ -ರಮೇಶ್ ಜಾರಕಿಹೊಳಿ, ಮಾಜಿ ಸಚಿವ
ಆ ಹಿರಿಯರ ಕಾಲದಲ್ಲಿ ವೀಡಿಯೊ ಇದ್ದಿದ್ದರೆ ಅದರ ಬಗ್ಗೆ ಎಚ್ಚರವಹಿಸುವಂತೆಯೂ ಅವರು ಉಪದೇಶಿಸುತ್ತಿದ್ದರು.


ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೆಲವು ಬೆಳವಣಿಗೆಗಳಿಂದ ನೋವಾಗಿದೆ -ಡಾ.ಸುಧಾಕರ್, ಸಚಿವ
ಅಂತಹ ನೋವುಗಳಿಗೆಲ್ಲಾ ಮಸಾಜ್ ಪರಿಹಾರವಲ್ಲ ಎಂದು ತಿಳಿಸಿ ಬಿಡಿ.


ಕೋವಿಡ್‌ಗೆ ಒಳಗಾಗಿ ಮೃತಪಟ್ಟವರ ಶವಸಂಸ್ಕಾರ ಮಾಡಿದವರನ್ನು ಸನ್ಮಾನಿಸಲಾಗುವುದು - ನಳಿನ್‌ಕುಮಾರ್ ಕಟೀಲು, ಸಂಸದ
ಇದು, ಸಕ್ರಿಯರಿಗೆ ಸಲ್ಲಬೇಕಾದ ಕಿರೀಟವನ್ನು ನಿಷ್ಕ್ರಿಯರಿಗೆ ತೊಡಿಸಿ ವೈಭವೀಕರಿಸುವ ಉಪಾಯ ಅಲ್ಲ ತಾನೇ?


ಕಾಂಗ್ರೆಸ್‌ನ ಕೀಲಿಕೈ ಈಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಕೈಯಲ್ಲಿದೆ - ಸಿಎಂ ಇಬ್ರಾಹೀಮ್, ಶಾಸಕ
ಬೀಗ ಬೇರೆಯವರ ಕೈಯಲ್ಲಿರುವಾಗ ಕೀಲಿಕೈ ಹಿಡಿದುಕೊಂಡು ಮೈತುರಿಸಿಕೊಳ್ಳಬೇಕಷ್ಟೆ.


ಫಲಿತಾಂಶ ಬಂದ ಬಳಿಕವೂ ಮಾತನಾಡಿದರೆ ನಮ್ಮಂತಹ ಮೂರ್ಖರು ಯಾರೂ ಇಲ್ಲ - ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ
ನೀವು ಮಾತನಾಡಿದರೂ ಮಾತನಾಡದಿದ್ದರೂ ನಿಮ್ಮ ಮೂರ್ಖತನದ ಬಗ್ಗೆ ಯಾವ ಮೂರ್ಖರು ತಾನೇ ಸಂಶಯಿಸುತ್ತಾರೆ?


ಮೇನಕಾಗಾಂಧಿ ನಮ್ಮ ಪಕ್ಷದ ಸಂಸದೆ ಎಂದು ಹೇಳಲು ಅವಮಾನವಾಗುತ್ತದೆ -ಅಜಯ್ ವಿಷ್ಣೋಯಿ, ಉ.ಪ್ರ. ಬಿಜೆಪಿ ಶಾಸಕ
ಮಾನ ಇದ್ದವರಿಗೆ ಆ ಪಕ್ಷದಲ್ಲಿ ಅವಮಾನ ಅನುಭವಿಸುವುದಕ್ಕೆ ಬೇರೆ ಸಾವಿರ ಕಾರಣಗಳೂ ಇವೆಯಲ್ಲ?


ಮಾದಕ ದ್ರವ್ಯಗಳ ವಿರುದ್ಧ ಶೂನ್ಯ ಸಹಿಷ್ಣು ನೀತಿ ಜಾರಿಗೆ ಬದ್ಧ -ಅಮಿತ್ ಶಾ, ಕೇಂದ್ರ ಸಚಿವ
ಅಂದರೆ ಮಾದಕ ದ್ರವ್ಯಗಳನ್ನು ಮೂಲಭೂತ ಮಾನವ ಹಕ್ಕುಗಳೆಂದು ಪರಿಗಣಿಸಿ ಆರೀತಿ ವ್ಯವಹರಿಸುವಿರಾ?


ಸಿದ್ದರಾಮಯ್ಯ ನಾಯಕ, ನಾನು ಹಿನ್ನೆಲೆ ಗಾಯಕ - ಸಿ.ಎಂ.ಇಬ್ರಾಹೀಮ್, ಶಾಸಕ
ಹಾಗೆಲ್ಲ ಹೇಳಿ ಜನರನ್ನು ಹೆದರಿಸಿ ಅವರಿಂದ ದೂರ ಓಡಿಸಬೇಡಿ.


ರಮೇಶ್ ಜಾರಕಿಹೊಳಿ ಸರಕಾರಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿಲ್ಲ - ಬೈರತಿ ಬಸವರಾಜ್, ಸಚಿವ
ಅವುಗಳನ್ನು ನೋಡಿದ ಜನ ಸಾಮಾನ್ಯರಿಗಷ್ಟೇ ಮುಜುಗರ.


ರಾಜ್ಯದಲ್ಲಿ ಯಡಿಯೂರಪ್ಪ ನಾಯಕತ್ವ ಬದಲಾವಣೆ ಆಗುವುದೋ ಇಲ್ಲವೋ ಎಂದು ಹೇಳುವಷ್ಟು ನಾನು ದೊಡ್ಡವನಲ್ಲ -ಸಿ.ಟಿ.ರವಿ, ಶಾಸಕ
ದಡ್ಡನಲ್ಲ ಎಂದಿರಬೇಕು.


ಕೊರೋನ 3ನೇ ಅಲೆ ಹಿನ್ನೆಲೆಯಲ್ಲಿ ಗುಜರಿ ಬಸ್‌ಗಳನ್ನು ಐಸಿಯು ಬೆಡ್ ಹಾಗೂ ಮೊಬೈಲ್ ಫೀವರ್ ಕ್ಲಿನಿಕ್‌ಗಳಾಗಿ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ - ಲಕ್ಷ್ಮಣ ಸವದಿ, ಡಿಸಿಎಂ
ಅವುಗಳನ್ನು ಮೊದಲ ಆರು ತಿಂಗಳ ಮಟ್ಟಿಗಾದರೂ ಕೇವಲ ಸಚಿವರ ಬಳಕೆಗೆ ಮೀಸಲಾಗಿಡಬೇಕು.


ನಾನು ಮತ್ತು ಪತ್ನಿ ಐಶ್ವರ್ಯಾ ರೈ ಜೊತೆಯಾಗಿ ನಟಿಸಿದ ಚಿತ್ರಗಳ ಪೈಕಿ 8ರಲ್ಲಿ ನನಗೆ ಅವಳಿಗಿಂತ ಕಡಿಮೆ ಸಂಭಾವನೆ ದೊರೆತಿತ್ತು - ಅಭಿಷೇಕ್ ಬಚ್ಚನ್, ನಟ
ಅಮಿತಾಬ್ ಅವರ ಬಚ್ಚ ಆಗದಿದ್ದರೆ, ಐಶ್ವರ್ಯ ರೈ ದೊರೆಯುವುದೇ ಕಷ್ಟವಿತ್ತು.


ಭಾರತದ ಆರ್ಥಿಕತೆಯ ಇತಿಹಾಸದಲ್ಲೇ ಜಿಎಸ್‌ಟಿಯು ಒಂದು ಮಹತ್ವದ ಮೈಲಿಗಲ್ಲು -ನರೇಂದ್ರ ಮೋದಿ, ಪ್ರಧಾನಿ
ವಿನಾಶದ ದಾರಿಯಲ್ಲೂ ಮೈಲುಗಲ್ಲುಗಳು ಇರುತ್ತವೆ, ಅಲ್ಲವೇ?


ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರದ ಶ್ವಾಸಕೋಶ ಸರಿಯಾಗಿದೆ, ಸರಕಾರ ಸಹಜವಾಗಿ ಉಸಿರಾಡುತ್ತಿದೆ - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ಸತ್ತಿರುವುದು ಮಿದುಳು ಮಾತ್ರ ಎಂದು ಸ್ಪಷ್ಟವಾಗಿ ಹೇಳಿ ಸಾರ್.


ನಾನು ಮತ್ತು 100 ವರ್ಷ ಆಸುಪಾಸಿನ ನನ್ನ ತಾಯಿ ಕೂಡಾ ಎರಡು ಡೋಸ್ ಕೋವಿಡ್ ಲಸಿಕೆ ತೆಗೆದುಕೊಂಡಿದ್ದೇವೆ - ನರೇಂದ್ರ ಮೋದಿ, ಪ್ರಧಾನಿ
ನೀವು ನಿಮ್ಮ ತಾಯಿ ತೆಗೆದುಕೊಂಡರೆ ಸಾಕೆ? ಉಳಿದ ತಾಯಂದಿರಿಗೆ ಎಷ್ಟರಮಟ್ಟಿಗೆ ಒದಗಿಸಿದ್ದೀರಿ ಎನ್ನುವ ಲೆಕ್ಕ ಕೊಡಿ.


ದುಷ್ಟರ ಸಂಹಾರ ಆಗಬೇಕು. ಆದರಿಂದ ದೇಶ, ರಾಜ್ಯ ಮತ್ತು ಬಿಜೆಪಿ ಪಕ್ಷಕ್ಕೆ ಒಳ್ಳೆಯದಾಗುತ್ತದೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಆದರೆ ಎಲ್ಲ ದುಷ್ಟರ ಸಂಹಾರವಾಗಿ ಬಿಟ್ಟರೆ ಮತ್ತೆ ಪಕ್ಷದಲ್ಲಿ ಎಷ್ಟು ಮಂದಿ ತಾನೇ ಉಳಿಯುತ್ತಾರೆ?


ಹಾದಿ -ಬೀದಿಯಲ್ಲಿ ಮಾತನಾಡುವವರಿಗೆ ನಾನು ಉತ್ತರ ಕೊಡಲ್ಲ - ಮುರುಗೇಶ್ ನಿರಾಣಿ, ಸಚಿವ
ನೀವೇನು ಮೂಗರ ನಾಯಕರೇ?


ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸವಾಲು ನನ್ನ ಮುಂದಿದೆ - ಯಡಿಯೂರಪ್ಪ, ಮುಖ್ಯಮಂತ್ರಿ
ಸರಿ, ದೀರ್ಘಾಯುಷ್ಯಕ್ಕಾಗಿ ಪ್ರಯತ್ನಿಸೋಣ.


ಸಿಎಂ ಯಡಿಯೂರಪ್ಪ ಹಾಗೂ ನಳಿನ್‌ಕುಮಾರ್ ಕಟೀಲು ನಮ್ಮ ಕ್ಯಾಪ್ಟನ್ - ಎಸ್.ಟಿ.ಸೋಮಶೇಖರ್, ಸಚಿವ
ಟೈಟಾನಿಕ್ ಹಡಗಿನ ಕತೆ ಹೇಳುತ್ತಿರಬೇಕು.


ದೇಶಭಕ್ತಿ ಕುರಿತ ಸಿನೆಮಾ ನೋಡಿದವರೆಲ್ಲ ದೇಶಭಕ್ತರಾಗಿಲ್ಲ - ಗಿರೀಶ್ ಕಾಸರವಳ್ಳಿ, ನಿರ್ದೇಶಕ
ತಮ್ಮ ಪ್ರಶಸ್ತಿ ವಿಜೇತ ಚಿತ್ರಗಳನ್ನು ಜನರು ಆ ಕಾರಣಕ್ಕೆ ನೋಡುತ್ತಿಲ್ಲ ಇರಬೇಕು.


ಕಾಂಗ್ರೆಸ್ ನಾಯಕರಿಗೂ ಮುಖ್ಯಮಂತ್ರಿ ಸ್ಥಾನದ ವೈರಸ್ ಅಂಟಿದೆ - ಶ್ರೀರಾಮುಲು, ಸಚಿವ
ನೀವೇನು ವ್ಯಾಕ್ಸಿನ್ ತೆಗೆದುಕೊಂಡು ಆ ವೈರಸ್‌ನಿಂದ ಮುಕ್ತಿ ಪಡೆದಿದ್ದೀರಾ?

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಪಿ.ಎ.ರೈ
ಪಿ.ಎ.ರೈ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X