ಕೋಟತಟ್ಟು ಗ್ರಾಪಂಗೆ ಉಡುಪಿ ಜಿಪಂ ಸಿಇಓ ಭೇಟಿ
![ಕೋಟತಟ್ಟು ಗ್ರಾಪಂಗೆ ಉಡುಪಿ ಜಿಪಂ ಸಿಇಓ ಭೇಟಿ ಕೋಟತಟ್ಟು ಗ್ರಾಪಂಗೆ ಉಡುಪಿ ಜಿಪಂ ಸಿಇಓ ಭೇಟಿ](https://www.varthabharati.in/sites/default/files/images/articles/2021/07/5/297598-1625501058.jpg)
ಉಡುಪಿ, ಜು.5: ಕೋಟತಟ್ಟು ಗ್ರಾಮ ಪಂಚಾಯತ್ಗೆ ಉಡುಪಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ಸೋಮವಾರ ಭೇಟಿ ನೀಡಿ, ಗ್ರಾಪಂ ಅಧೀನದಲ್ಲಿರುವ ಕಾರಂತ ಥೀಮ್ ಪಾಕ್ರ್ ಅಭಿವೃದ್ಧಿ ಕುರಿತಂತೆ ಚರ್ಚಿಸಿದರು.
ಗ್ರಾಪಂನ ಎಸ್.ಆರ್.ಎಂ.ಎಲ್.ಆರ್. ಘಟಕಗಳನ್ನು ವಿಕ್ಷೀಸಿ ಪಂಚಾ ಯತ್ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದ ಅವರು, ಕಾರಂತ ಥೀಂ ಪಾರ್ಕ್ ಕರ್ತವ್ಯಾಧಿಕಾರಿ ಪೂರ್ಣಿಮಾ ಅವರೊಂದಿಗೆ ಥೀಂ ಪಾರ್ಕ್ಗೆ ಬರುವ ರಸ್ತೆಯ ಅಗಲಿಕರಣ ಹಾಗೂ ಕಾರಂತ ಸಮಾಧಿ ಕುರಿತು ವಿಶೇಷವಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷ ವಾಸು ಪೂಜಾರಿ, ಹಾಗೂ ಅಭಿವೃದ್ಧಿ ಅಧಿಕಾರಿ ಶೈಲಜ ಎಸ್.ಪೂಜಾರಿ, ಜಿಪಂ ಇಂಜಿನಿಯರ್ ಮೋಹನ್ರಾಜ್ ನಾಯಕ್, ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಆರ್.ಇಬ್ರಾಹಿಂಪುರ, ಕೋಟ ಹೋಬಳಿ ಕಂದಾಯ ಅಧಿಕಾರಿ ರಾಜು, ಕೋಟ ಗ್ರಾಮ ಲೆಕ್ಕಿಗ ಚಲುವರಾಜು, ಕೋಟತಟ್ಟು ಗ್ರಾಮಪಂಚಾಯತ್ ಸದಸ್ಯರಾದ ಸತೀಶ್ ಕುಂದರ್, ಗ್ರಾಪಂ ಸದಸ್ಯ ಸಂತೋಷ್ ಪ್ರಭು ಮೊದಲಾದ ವರು ಉಪಸ್ಥಿತರಿದ್ದರು.
Next Story