ಪುತ್ತೂರು: ತಲವಾರು ಪ್ರದರ್ಶಿಸಿ ಬೆದರಿಕೆ; ದೂರು ದಾಖಲು
![ಪುತ್ತೂರು: ತಲವಾರು ಪ್ರದರ್ಶಿಸಿ ಬೆದರಿಕೆ; ದೂರು ದಾಖಲು ಪುತ್ತೂರು: ತಲವಾರು ಪ್ರದರ್ಶಿಸಿ ಬೆದರಿಕೆ; ದೂರು ದಾಖಲು](https://www.varthabharati.in/sites/default/files/images/articles/2021/07/7/297837-1625642931.gif)
ಪುತ್ತೂರು, ಜು.7: ಯುವಕರಿಬ್ಬರಿಗೆ ತಲವಾರು ಪ್ರದರ್ಶಿಸಿ ಬೆದರಿಕೆಯೊಡ್ಡಿರುವ ಪ್ರಸಂಗವೊಂದು ಪುತ್ತೂರು ನಗರದ ಹೊರವಲಯದ ಬನ್ನೂರು ಜೈನರ ಗುರಿ ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿರುವ ಬಗ್ಗೆ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳೀಯರಾದ ಫಯಾಝ್ ಮತ್ತು ಝಿಯಾದ್ ಎಂಬವರು ರಾತ್ರಿ ವೇಳೆ ಅಂಗಡಿ ಬಳಿ ನಿಂತಿದ್ದರೆನ್ನಲಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳಾದ ಅಭಿಜಿತ್ ಮತ್ತು ಶರತ್ ಎಂಬವರು ಕ್ಷುಲ್ಲಕ ಕಾರಣಕ್ಕೆ ತಲವಾರು ಝಳಪಿಸಿ ಜೀವ ಬೆದರಿಕೆ ಒಡ್ಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆನ್ನಲಾಗಿದೆ.
Next Story