ಕಾಪು: ಶಾಸಕರಿಂದ ಮಳೆಹಾನಿ ಪರಿಹಾರ ಚೆಕ್ ವಿತರಣೆ
![ಕಾಪು: ಶಾಸಕರಿಂದ ಮಳೆಹಾನಿ ಪರಿಹಾರ ಚೆಕ್ ವಿತರಣೆ ಕಾಪು: ಶಾಸಕರಿಂದ ಮಳೆಹಾನಿ ಪರಿಹಾರ ಚೆಕ್ ವಿತರಣೆ](https://www.varthabharati.in/sites/default/files/images/articles/2021/07/7/297886-1625664277.jpg)
ಕಾಪು: ಇತ್ತೀಚೆಗೆ ಕಾಪು ತಾಲೂಕು ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಮಳೆಹಾನಿ ಪರಿಹಾರ ಚೆಕ್ ಹಾಗೂ ಕಾಪು ಪುರಸಭೆ ವ್ಯಾಪ್ತಿಯ ನೆರೆಪರಿಹಾರ ಮನೆ ನಿರ್ಮಾಣ ಮಂಜೂರಾತಿ ಪತ್ರವನ್ನು ಕಾಪು ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಶಾಸಕ ಲಾಲಾಜಿ ಆರ್ ಮೆಂಡನ್ ವಿತರಿಸಿದರು.
ಒಟ್ಟು 9. 89. ರೂಗಳ ಪರಿಹಾರ ಚೆಕ್ನ್ನು ತಾಲೂಕಿನ 43 ಫಲಾನುಭವಿಗಳಿಗೆ ವಿತರಿಸಿದರು. ಹಾಗೂ ಕಾಪು ಪುರಸಭೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಉಂಟಾದ ವಿಪರೀತ ಮಳೆಯಿಂದಾಗಿ ಮನೆ ದುರಸ್ತಿ ಹಾಗೂ ಮನೆ ನಿರ್ಮಾಣ ಮಂಜೂರಾತಿ ಪತ್ರವನ್ನು ಸುಮಾರು 12 ಫಲಾನುಭವಿಗಳಿಗೆ ವಿತರಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಿಲ್ಪಾ ಜಿ ಸುವರ್ಣ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರು ಶಶಿಪ್ರಭಾ ಶೆಟ್ಟಿ, ಪಲಿಮಾರು ಪಂಚಾಯತ್ ಅಧ್ಯಕ್ಷರು ಗಾಯತ್ರಿ ಪ್ರಭು, ಬೆಳ್ಳೆ ಪಂಚಾಯತ್ ಅಧ್ಯಕ್ಷರು ಸುಧಾಕರ್ ಪೂಜಾರಿ, ವಿವಿಧ ಗ್ರಾಮ ಪಂಚಾಯತ್ ಗಳ ಸದಸ್ಯರು, ಕಾಪು ತಾಲೂಕು ಉಪತಹಶೀಲ್ದಾರ್ ರವಿಶಂಕರ್, ಅಶೋಕ್ ಕುಮಾರ್, ಕಂದಾಯ ನಿರೀಕ್ಷಕರು ಸುಧೀರ್ ಕುಮಾರ್ ಶೆಟ್ಟಿ, ಹಾಗೂ ಆಯಾ ಗ್ರಾಮಗಳ ಗ್ರಾಮ ಲೆಕ್ಕಧಿಕಾರಿಯವರುಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು