ಪಡುಬಿದ್ರಿ: ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ನಿಂದ ಸೈಕಲ್ ಜಾಥಾ
![ಪಡುಬಿದ್ರಿ: ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ನಿಂದ ಸೈಕಲ್ ಜಾಥಾ ಪಡುಬಿದ್ರಿ: ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ನಿಂದ ಸೈಕಲ್ ಜಾಥಾ](https://www.varthabharati.in/sites/default/files/images/articles/2021/07/7/297906-1625668263.jpg)
ಪಡುಬಿದ್ರಿ: ತೈಲ ಬೆಲೆ, ದಿನಬಳಕೆ ವಸ್ತುಗಳ ದರ ಏರಿಕೆ ಮಾಡುವ ಮೂಲಕ ಬಿಜೆಪಿ ಸರಕಾರ ಬಡವರ ಜನ ಸಾಮಾನ್ಯರ ರಕ್ತವನ್ನು ಹೀರುತ್ತಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದರು.
ಅವರು ಬುಧವಾರ ಫಲಿಮಾರು ಪೇಟೆಯಲ್ಲಿ ಕೇಂದ್ರ ಸರ್ಕಾರ ತೈಲ ಹಾಗೂ ದಿನನಿತ್ಯ ವಸ್ತುಗಳ ಬೆಲೆ ಏರಿಸುತ್ತಿರುವುದರ ವಿರುದ್ಧ ಸೈಕಲ್ ಜಾಥಾದ ಮೂಲಕ ಪ್ರತಿಭಟನೆ ನಡೆಸಿ ಮಾತನಾಡಿದರು.
ಕೊರೋನ ಸಂದಿಗ್ದ ಪರಿಸ್ಥಿತಿಯಲ್ಲಿ ಉಂಟಾದ ಲಾಕ್ಡೌನ್ನಿಂದ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ತೈಲ ಬೆಲೆ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಏರಿಸುವ ಮೂಲಕ ಜನಸಾಮಾನ್ಯರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಡವರ, ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲದೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಅವರು ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಲಸಿಕೆ ನೀಡುವಲ್ಲಿಯೂ ವಿಫಲವಾದ ಮೋದಿ ಸರಕಾರ ಸರ್ವೋಚ್ಚ ನ್ಯಾಯಾಲಯದ ಆದೇಶದ ಬಳಿಕ ಎಚ್ಚೆತ್ತುಕೊಂಡು ಲಸಿಕೆ ದೊರೆಯುವಂತಾಗಿದೆ ಎಂದರು.
ಸೈಕಲ್ ಜಾಥಾ: ಪಡುಬಿದ್ರಿ ಸ್ಥಾನೀಯ ಸಮಿತಿ ಪಡುಬಿದ್ರಿ ಪೇಟೆಯಿಂದ ಫಲಿಮಾರುವರೆ ಹಮ್ಮಿಕೊಂಡ ಸೈಕಲ್ ಜಾಥಾಕ್ಕೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಚಾಲನೆ ನೀಡಿದರು. ಫಲಿಮಾರು ಸ್ಥಾನೀಯ ಸಮಿತಿ ನಂದಿಕೂರಿನಿಂದ ಹಮ್ಮಿಕೊಂಡ ಸೈಕಲ್ ಜಾಥಾಕ್ಕೆ ಕಾಂಗ್ರೆಸ್ ಮುಖಂಡ ರಾಜಶೇಖರ್ ಕೋಟ್ಯಾನ್ ಚಾಲನೆ ನೀಡಿದರು. ಸೈಕಲ್ ಜಾಥಾವು ಅಡ್ವೆ ಮೂಲಕ ಫಲಿಮಾರು ಪೇಟೆ ತಲುಪಿತು. ಫಲಿಮಾರು ಪೇಟೆಯಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಮಹಿಳಾ ಕಾರ್ಯಕರ್ತರು ಅಡುಗೆ ಅನಿಲ ಪ್ರದರ್ಶಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನವೀನ್ಚಂದ್ರ ಸುವರ್ಣ, ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೇನ್, ಮುಖಂಡರಾದ ಎಂ.ಪಿ. ಮೊಯಿದಿನಬ್ಬ, ಜಿತೇಂದ್ರ ಪುಟಾರ್ಡೊ, ದಿನೇಶ್ ಕೋಟ್ಯಾನ್, ಕರುಣಾಕರ್ ಪೂಜಾರಿ, ಯಶವಂತ ಪೂಜಾರಿ, ಜ್ಯೋತಿ ಮೆನನ್, ಗಣೇಶ್ ಕೋಟ್ಯಾನ್, ನವೀನ್ ಎನ್. ಶೆಟ್ಟಿ, ಎಂ.ಎಸ್. ಶಫಿ, ನಿಝಾಮುದ್ದೀನ್, ಅಬ್ದುಲ್ಲಾ ಫಲಿಮಾರು, ಗಿರಿಯಪ್ಪ ಪೂಜಾರಿ, ವಿಜಯ ಜೆ. ಶೆಟ್ಟಿ, ಯೋಗಾನಂದ, ಜಯಶ್ರೀ, ಶಿವರಾಮ್, ಗೋಪಾಲ ಪೂಜಾರಿ, ಅಮಿತಾ ಪೂಜಾರಿ, ಶಶಿ ಅಡ್ವೆ, ಗಣೇಶ್ ಅವರಾಲ್, ಸುಧೀರ್ ನಂದಿಕೂರು ಮೊದಲಾದವರು ಉಪಸ್ಥಿತರಿದ್ದರು.