ಶಿರಿಯಾರ ಗ್ರಾಪಂ ಸದಸ್ಯ ಗುಂಡು ಮರಕಾಲ ನಿಧನ
![ಶಿರಿಯಾರ ಗ್ರಾಪಂ ಸದಸ್ಯ ಗುಂಡು ಮರಕಾಲ ನಿಧನ ಶಿರಿಯಾರ ಗ್ರಾಪಂ ಸದಸ್ಯ ಗುಂಡು ಮರಕಾಲ ನಿಧನ](https://www.varthabharati.in/sites/default/files/images/articles/2021/07/8/298058-1625758914.jpg)
ಕೋಟ, ಜು.8: ಶಿರಿಯಾರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಾಹೇಬ್ರಕಟ್ಟೆ ಸಮೀಪದ ಜಂಬೂರು ನಿವಾಸಿ ಗುಂಡು ಮರಕಾಲ (46) ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾದರು.
ಇವರು ಶಿರಿಯಾರ ಗ್ರಾಪಂ ಮೂರು ಅವಧಿಗೆ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅದೇ ರೀತಿ ಸಾಹೇಬ್ರಕಟ್ಟೆ ರಿಕ್ಷಾ ಯೂನಿಯನ್ ಮುಖಂಡ ರಾಗಿ ಗುರುತಿಸಿಕೊಂಡಿದ್ದರು. ಮೃತರು, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಶಿರಿಯಾರ ಗ್ರಾಪಂ ಅಧ್ಯಕ್ಷ ಸುಧೀಂದ್ರ ಶೆಟ್ಟಿ, ಶಿರಿಯಾರ ವ್ಯವಸಾಯ ಸಂಘದ ಅಧ್ಯಕ್ಷ ಪ್ರದೀಪ್ ಬಲ್ಲಾಳ್, ಕಾಡೂರು ಗ್ರಾಪಂ ಉಪಾಧ್ಯಕ್ಷೆ ಅಮಿತಾ ರಾಜೇಶ್ ಸೇರಿದಂತೆ ನೂರಾರು ಮಂದಿ ಗಣ್ಯರು ಮೃತರ ಅಂತಿಮ ದಶನರ್ ಪಡೆದು ಸಂತಾಪ ಸೂಚಿಸಿದ್ದಾರೆ.
Next Story