ಉರ್ವ ಮಾರುಕಟ್ಟೆ ಕುರಿತು ಮೇಯರ್ ಸಭೆ
![ಉರ್ವ ಮಾರುಕಟ್ಟೆ ಕುರಿತು ಮೇಯರ್ ಸಭೆ ಉರ್ವ ಮಾರುಕಟ್ಟೆ ಕುರಿತು ಮೇಯರ್ ಸಭೆ](https://www.varthabharati.in/sites/default/files/images/articles/2021/07/9/298176-1625841189.jpg)
ಮಂಗಳೂರು, ಜು.9: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಉರ್ವ ಮಾರುಕಟ್ಟೆಯನ್ನು ಮುಡಾದಿಂದ ಪಾಲಿಕೆಗೆ ಹಸ್ತಾಂತರಗೊಳಿಸುವ ಬಗ್ಗೆ ಮೇಯರ್ ಪ್ರೇಮಾನಂದ ಶೆಟ್ಟಿಯ ಅಧ್ಯಕ್ಷತೆಯಲ್ಲಿ ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ಶುಕ್ರವಾರ ಸಭೆ ನಡೆಯಿತು.
ಮುಡಾ ಕಚೇರಿಯಿಂದ ಈಗಾಗಲೇ ಉರ್ವ ಮಾರುಕಟ್ಟೆಯ ಮೇಲಿನ ಮಹಡಿಗಳಲ್ಲಿರುವ ಕೆಲವು ಅಂಗಡಿಗಳಿಗೆ ಸಂಬಂಧಿಸಿ ಹರಾಜು ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಈ ಹಿಂದೆ ಹಳೆ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿದ್ದವರನ್ನು ಹೊಸ ಮಾರುಕಟ್ಟೆಗೆ ಸ್ಥಳಾಂತರಗೊಳಿಸಲು ಮತ್ತು ಸರಕಾರದ ನಿಯಮಾವಳಿಯಂತೆ ಹರಾಜು ಹಾಕುವ ಸಲುವಾಗಿ ವ್ಯಾಪಾರಿಗಳ ಸಭೆ ಕರೆಯಲು ನಿರ್ಣಯಿಸಲಾಯಿತು.
ಸಭೆಯಲ್ಲಿ ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರು, ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಪಾಲಿಕೆಯ ಸದಸ್ಯರಾದ ಸಂಧ್ಯಾ ಮೋಹನ್ ಆಚಾರ್ಯ, ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
Next Story