ಮಂಡ್ಯ: ಕುಡಿದ ಮತ್ತಿನಲ್ಲಿ ಗೆಳೆಯನ ಕೊಲೆ
ಮಂಡ್ಯ, ಜು.11: ಕುಡಿದ ಮತ್ತಿನಲ್ಲಿ ಗೆಳೆಯರಿಬ್ಬರ ನಡುವೆ ಉಂಟಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕು ಚನ್ನಳ್ಳಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಚನ್ನಳ್ಳಿ ಗ್ರಾಮದ ಕುಮಾರ್(34) ಕೊಲೆಯಾದ ವ್ಯಕ್ತಿ. ಈತನ ಗೆಳೆಯ ಮಹದೇವ ಕೊಲೆ ಮಾಡಿದ ಆರೋಪಿ.
ಕುಮಾರ್ ಮತ್ತು ಮಹದೇವ ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದಾಗ, ಮಹದೇವ ಮದ್ಯದ ಬಾಟಲ್ನಿಂದ ಹೊಡೆದು ಕುಮಾರ್ ನನ್ನು ಕೊಲೆಗೈದ ಎನ್ನಲಾಗಿದೆ.
ಈ ಸಂಬಂಧ ಅರಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story