ಬೆಂಗಳೂರಿನಲ್ಲಿ ಉ.ಪ್ರ. ಸರಕಾರದ ಜಾಹೀರಾತು ಫಲಕ: ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ ವಕೀಲನಿಗೆ ಕಾನೂನು ಕ್ರಮದ ಬೆದರಿಕೆ

Photo: twitter
ಬೆಂಗಳೂರು, ಜು.13: ನಗರದ ವಿಮಾನನಿಲ್ದಾಣದ ಸಮೀಪ ಉತ್ತರಪ್ರದೇಶ ಸರಕಾರದ ಸಾಧನೆಗಳ ಕುರಿತ ಬೃಹತ್ ಜಾಹೀರಾತುಫಲಕದ ಛಾಯಾಚಿತ್ರವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ ಬೆಂಗಳೂರಿನ ನ್ಯಾಯವಾದಿಯೊಬ್ಬರ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದಾಗಿ ಉತ್ತರಪ್ರದೇಶ ಪೊಲೀಸರು ಕಾನೂನುಕ್ರಮದ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಅವರ ಭಾವಚಿತ್ರದೊಂದಿಗೆ 'ದೇಶದಲ್ಲಿ ಉತ್ತರಪ್ರದೇಶ ನಂ.1' ಹಾಗೂ ʼನಾಲ್ಕು ಲಕ್ಷ ಯುವಕರಿಗೆ ಸರಕಾರಿ ಉದ್ಯೋಗ' ಎಂಬ ಘೋಷಣೆಗಳ ಈ ಜಾಹೀರಾತು ಫಲಕ ಛಾಯಾಚಿತ್ರವನ್ನು ಬೆಂಗಳೂರಿನ ನ್ಯಾಯವಾದಿ ಶಿಶಿರ ರುದ್ರಪ್ಪ ಅವರು ಟ್ವಿಟ್ಚರ್ನಲ್ಲಿ ಶೇರ್ ಮಾಡಿದ್ದರು.
ಉತ್ತರಪ್ರದೇಶದ ಚುನಾವಣಾ ಪ್ರಚಾರ ಕರ್ನಾಟಕದಲ್ಲಿ ಆರಂಭವಾಗಿದೆ ಎಂಬ ಫೋಟೋಶೀರ್ಷಿಕೆಯನ್ನು ಕೂಡಾ ಅವರು ಬರೆದಿದ್ದರು. ಟ್ವಿಟ್ಟರ್ ನಲ್ಲಿ ಈ ಫೋಟೋ ಪ್ರಕಟವಾದ ಬಳಿಕ ಉತ್ತರ ಪ್ರದೇಶ ಸರಕಾರದ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಶಿಶಿರ್ ಸಿಂಗ್ ಪ್ರತಿಕ್ರಿಯಿಸುತ್ತಾ, ಕರ್ನಾಟಕದಲ್ಲಿ ಅಂತಹ ಯಾವುದೇ ಜಾಹೀರಾತನ್ನು ನೀಡಲಾಗಿಲ್ಲ ಮತ್ತು ಈ ಛಾಯಾಚಿತ್ರವು ನಕಲಿಯೆಂದು ತಿಳಿಸಿದ್ದರು.
ಈ ಟ್ವಿಟ್ಟರ್ ಬಳಕೆದಾರನ ವಿರುದ್ಧ ಸೂಕ್ತ ಕಾನೂನುಕ್ರಮವನ್ನು ಕೈಗೊಳ್ಳಲಾಗುವುದೆಂದು ಉತ್ತರಪ್ರದೇಶದ ಸರಕಾರದ ಸೈಬರ್ ಪೊಲೀಸ್ ಘಟಕವು ಎಚ್ಚರಿಕೆ ನೀಡಿತ್ತು.
ಶಿಶಿರ್ ಸಿಂಗ್ ಅವರ ಟ್ವೀಟ್ ಗೆ ತಕ್ಷಣವೇ ಪ್ರತಿಕ್ರಿಯಿಸಿದ ಶಿಶಿರ ಅವರು, ಟ್ವಿಟ್ಟರ್ ನಲ್ಲಿ ವಿವಾದಿತ ನಾಮಫಲಕವಿರುವ ಸ್ಥಳದ ವಿಡಿಯೋ ಪ್ರಸಾರ ಮಾಡಿದ್ದರು. ಅದಕ್ಕೆ ಪೂರಕವಾದ ಸಾಕ್ಷಾಧಾರಗಳನ್ನು ಕೂಡಾ ಅವರು ವಿಡಿಯೋದಲ್ಲಿ ತೋರಿಸಿದ್ದರು.
ಮಂಗಳವಾರದಂದು ವಿವಾದಾತ್ಮಕ ಫಲಕವನ್ನು ತೆಗೆದುಹಾಕಲಾಗುತ್ತಿರುವ ವಿಡಿಯೋವನ್ನು ಕೂಡಾ ಶಿಶಿರ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದರು. "ಇದೀಗ ಜಾಹೀರಾತುಫಲಕವನ್ನು ತೆಗೆದುಹಾಕಲಾಗಿದೆ. ಅದೃಷ್ಟವಶಾತ್ ಆ ದೃಶ್ಯವನ್ನು ವಿಡಿಯೋದಲ್ಲಿ ಸೆರೆಹಿಡಿಯುವಲ್ಲಿ ನನ್ನ ತಂಡವು ಯಶಸ್ವಿಯಾಗಿದೆ" ಎಂದವರು ಹೇಳಿದ್ದರು.
ಈ ಮಧ್ಯೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಪ್ರಾಧಿಕಾರವು, ವಿವಾದಿತ ಜಾಹೀರಾತಿಗೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದೆ. ಕೇವಲ ಟ್ವಟ್ಟರ್ನಲ್ಲಿ ಜಾಹೀರಾತು ಫಲಕದ ಚಿತ್ರವನ್ನು ಶೇರ್ ಮಾಡಿದ್ದ ಕಾರಣಕ್ಕಾಗಿ ಶಿಶಿರ ಅವರಿಗೆ ಕಾನೂನುಕ್ರಮದ ಬೆದರಿಕೆ ಒಡ್ಡಿರುವುದಕ್ಕಾಗಿ ಉತ್ತರಪ್ರದೇಶ ಸರಕಾರ ಹಾಗೂ ಆ ರಾಜ್ಯದ ಪೊಲೀಸರ ವಿರುದ್ಧ ಟ್ವಿಟ್ಟರ್ನಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
UP election campaign has begun in Karnataka pic.twitter.com/U1NVT9pTci
— Shishira (@shishirar) July 12, 2021
Be responsible. Don’t spread fake news please. No such advertisement given anywhere in the State of Karnataka. @dgpup @cyberpolice_up https://t.co/VNlx8i4Zju
— Shishir (@ShishirGoUP) July 12, 2021
- @ShishirGoUP ji
— Shishira (@shishirar) July 12, 2021
Here is the video -
1) see the hoarding clearly!
2) see the truck of Bangalore airport parked in this
3) JCDecaux which is the official hoarding partner for Bangalore airport
Now atleast please delete your tweet and of your department. @InfoUPFactCheck pic.twitter.com/55GyuCArlB
After the blatant disinformation campaign that Shishira's tweet was 'fake', the hoarding in Bengaluru airport is being hurriedly removed today! https://t.co/FL98A6Ylu0
— Karthik (@beastoftraal) July 13, 2021
Look at the extent to which bjp administration will go to to hide the truth/ fact. https://t.co/n0j2Pmd0Jl
— Lavanya Ballal | ಲಾವಣ್ಯ ಬಲ್ಲಾಳ್ (@LavanyaBallal) July 13, 2021







