ಅಂತರ್ಜಾಲ ತುಳು ವಿಚಾರಗೋಷ್ಠಿಗೆ ಚಾಲನೆ
ಮಂಗಳೂರು, ಜು.15: ತುಳು ಅತ್ಯಂತ ಪ್ರಾಚೀನ ಹಾಗೂ ಪರಂಪರೆಯ ಭಾಷೆಯಾಗಿದೆ. ತುಳುನಾಡಿನ ಸಂಸ್ಕೃತಿ-ಸಂಸ್ಕಾರವನ್ನು ಉಳಿಸಿ ಬೆಳೆಸುವಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯು ವಿಶ್ವ ಮಟ್ಟದಲ್ಲಿನ ತುಳು ಸಂಘಟಕರನ್ನು ಸಾಮಾಜಿಕ ಜಾಲತಾಣದ ಮೂಲಕ ಒಂದೇ ವೇದಿಕೆಗೆ ಕರೆತರುವ ಪ್ರಾಮಾಣಿಕ ಪ್ರಯತ್ನ ಶ್ಲಾಘನೀಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವಾ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವಿಶೇಷ ಸಂಯೋಜನೆಯಲ್ಲಿ ವಿಶ್ವದ ವಿವಿಧ ತುಳು ಸಂಘಟನೆಗಳ ಪ್ರಮುಖರ ಅಂತರ್ಜಾಲ ತುಳು ವಿಚಾರಗೋಷ್ಠಿಯ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ‘ತುಳುನಾಡಿನ ಕಟ್ಟುಕಟ್ಟಲೆ’ ಎಂಬ ವಿಷಯದಲ್ಲಿ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ ಮಾತನಾಡಿದು.
ವಿಚಾರಗೋಷ್ಠಿಯಲ್ಲಿ ಆಸ್ಟ್ರೇಲಿಯಾದಿಂದ ಸುರೇಶ್ ಪೂಂಜ, ಜಪಾನ್ನಿಂದ ಶೀಕಲಾ ಬೊಲ್ಲಂಜೆ, ಬ್ಯಾಂಕಾಂಕ್ನಿಂದ ರೋಶನ್ ಪಿಂಟೋ, ಜರ್ಮನಿಯಿಂದ ಕಕ್ವಗುತ್ತು ಭಾನುಮತಿ ಶೆಟ್ಟಿ, ಇಟಲಿಯಿಂದ ಕೌಡೂರು ನಾರಾಯಣ ಶೆಟ್ಟಿ, ಕ್ಯಾಲಿಫೋರ್ನಿಯಾದಿಂದ ಅನಿತಾ ನಾಯಕ್, ಅಮೇರಿಕಾದಿಂದ ಭಾಸ್ಕರ ಶೇರಿಗಾರ್, ಸುಧಾಕರ ಆಳ್ವಾ, ಶ್ರೀವಲ್ಲಿ ಫ್ಲೋರಿಡಾ, ಉಮೇಶ್ ಅಸೈಗೋಳಿ, ಪ್ರಕಾಶ್ ಉಡುಪ, ದಕ್ಷಿಣ ಆಫ್ರಿಕಾದಿಂದ ಶರತ್ ಶೆಟ್ಟಿ, ಕತರ್ನಿಂದ ರವಿ ಶೆಟ್ಟಿ, ದುಬೈಯಿಂದ ಗಣೇಶ್ ರೈ, ಮನೋಹರ್ ತೋನ್ಸೆ, ಪ್ರಕಾಶ್ ರಾವ್ ಪಯ್ಯೆರ್, ಸೌದಿ ಅರೇಬಿಯಾದಿಂದ ಸಂತೋಷ್ ಶೆಟ್ಟಿ, ಒಮನ್ನಿಂದ ರಮಾನಂದ ಶೆಟ್ಟಿ, ಕುವೈತ್ನಿಂದ ಸನತ್ ಶೆಟ್ಟಿ, ಬಹರೈನ್ನಿಂದ ಗಣೇಶ್ ಮಾಣಿಲ, ಬೆಂಗಳೂರಿನಿಂದ ಡಾ.ಕೆ.ಸಿ.ಬಳ್ಳಾಲ್, ಕೆ.ಎನ್.ಅಡಿಗ ಅಡೂರು, ಯಾದವ ಕಲ್ಲಾಪು, ರಾಜರಾಂ ಶೆಟ್ಟಿ ಉಪ್ಪಳ, ಮುಂಬೈಯಿಂದ ಧರ್ಮಪಾಲ್ ದೇವಾಡಿಗ, ಗುಜರಾತ್ನಿಂದ ಬಾಲಕೃಷ್ಣ ವಾಪಿ, ಈಶ್ವರ ಚಿಟ್ಪಾಡಿ, ವಿಜಯಕುಮಾರ್ ಭಂಡಾರಿ, ಹಾಸನದ ಶೀನಪ್ಪಆಳ್ವಾ, ಭದ್ರವಾತಿಯ ಡಾ. ಹರೀಶ್ ದೇಲಂತಬೆಟ್ಟು, ದೆಹಲಿಯ ವಸಂತ ಶೆಟ್ಟಿ ಬೆಳ್ಳಾರೆ, ಡಾ.ಬಾಲಕೃಷ್ಣ ಶೆಟ್ಟಿ ಪೂನಾ ಅಭಿಪ್ರಾಯ ಮಂಡಿಸಿದರು.
ಅಕಾಡಮಿಯ ಸದಸ್ಯರಾದ ಸವೋತ್ತಮ ಶೆಟ್ಟಿ ದುಬೈ, ನಿಟ್ಟೆ ಶಶಿಧರ ಶೆಟ್ಟಿ, ಕಾಂತಿ ಶೆಟ್ಟಿ ಬೆಂಗಳೂರು, ವಿಜಯಲಕ್ಷ್ಮಿ ಪ್ರಸಾದ್ ರೈ. ಕಲಾವತಿ ದಯಾನಂದ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಸಹ ಸಂಚಾಲಕ ನಿಟ್ಟೆ ಶಶಿಧರ ಶೆಟ್ಟಿ ಸ್ವಾಗತಿಸಿದರು. ರಿಜಿಸ್ಟ್ರಾರ್ ಕವಿತಾ ಪ್ರಶಾಂತ್ ವಂದಿಸಿದರು. ಸದಸ್ಯ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.