ಮತ್ತೆ ಕೊಚ್ಚಿ ಹೋದ ನಡೂರು ಕಿರು ಸೇತುವೆ

ಬ್ರಹ್ಮಾವರ, ಜು.16: ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದ ಮಂದಾರ್ತಿ ಮತ್ತು ಕೂರಾಡಿ ಬಂಡೀಮಠ ಸಂಪರ್ಕ ರಸ್ತೆಯ ಕಾಡೂರು ಗ್ರಾಪಂ ವ್ಯಾಪ್ತಿಯ ನಡೂರು ತಾತ್ಕಾಲಿಕ ಕಿರು ಸೇತುವೆ ಇದೀಗ ಎರಡನೇ ಬಾರಿಗೆ ಕೊಚ್ಚಿಕೊಂಡು ಹೋಗಿದೆ.
ಕಳೆದ ಮಳೆಗಾಲದಲ್ಲಿ ಈ ಕಿರು ಸೇತುವೆ ಮುರಿದು ಬಿದ್ದಿತ್ತು. ನಂತರ ಸ್ಥಳೀಯರು ಸೇರಿ ಗ್ರಾಪಂನಿಂದ ಮೋರಿ ಅಳವಡಿಸಿ ಮಣ್ಣು ಹಾಕಿ ತಾತ್ಕಾಲಿಕ ಕಿರು ಸೇತುವೆಯನ್ನು ನಿರ್ಮಿಸಿದ್ದರು. ಜು.15ರಂದು ಮಳೆಯ ನೀರಿನ ರಭಸಕ್ಕೆ ಮೋರಿ ಹಾಗೂ ಮಣ್ಣು ಕೊಚ್ಚಿಕೊಂಡು ಹೋಗಿದ್ದು, ರಸ್ತೆ ಸಂಪರ್ಕ ಕಡಿದು ಕೊಂಡಿದೆ.
ಬಾರಕೂರು -ನಡೂರು ಮೂಲಕ ಮಂದಾರ್ತಿಗೆ ಈ ರಸ್ತೆಯಲ್ಲಿ ಸಾಗಲು ಕೇವಲ 6ಕಿ.ಮಿ.ನಲ್ಲಿ ದೂರ ಇದ್ದು, ಇದೀಗ ಸಂಪರ್ಕ ಕಡಿತಗೊಂಡ ಕಾರಣ ಮಂದಾರ್ತಿ ಹೋಗಲು ರಂಗನಕೆರೆ ಮೂಲಕ 16ಕಿ.ಮೀ. ದೂರು ಸುತ್ತಿ ಬಳಸಿ ಹೋಗಬೇಕಾಗಿದೆ. ಕೂಡಲೇ ಇಲ್ಲಿ ಶಾಶ್ವತ ಸೇತುವೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Next Story





