ಕುಂದಾಪುರದಲ್ಲಿ 11 ಮಂದಿಯ ಕೃಷಿ ಬೆಳೆಗೆ ಹಾನಿ
ಉಡುಪಿ, ಜು.20: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ಕೃಷಿ ಬೆಳೆ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿರುವ ವರದಿಗಳು ಬರುತಿದ್ದು, ಕುಂದಾಪುರ ತಾಲೂಕಿನ ಅಮಾಸೆಬೈಲು, ರಟ್ಟಾಡಿ, ಗುಜ್ಜಾಡಿ ಹಾಗೂ ಬೆಳ್ಳಾಲ ಗ್ರಾಮಗಳಲ್ಲಿ ಒಟ್ಟು 11 ಬೆಳೆ ಹಾನಿ ಪ್ರಕರಣಗಳು ವರದಿಯಾಗಿವೆ.
ಬೆಳ್ಳಾಲ ಗ್ರಾಮದ ಚಂದು ಮೊಗೇರ್ತಿ, ಗುಜ್ಜಾಡಿ ಗ್ರಾಮದ ಕೊರಗ ಪೂಜಾರಿ, ರಟ್ಟಾಡಿ ಗ್ರಾಮದ ರವಿಶೆಟ್ಟಿ, ಗಿರಿಜಮ್ಮ ಶೆಡ್ತಿ, ಅಮಾಸೆಬೈಲು ಗ್ರಾಮದ ನರ್ಸಿ ಪೂಜಾರ್ತಿ, ರತ್ನ ಪೂಜಾರಿ, ಗುಲಾಬಿ ಶೆಡ್ತಿ, ಶೇಖರ ಶೆಟ್ಟಿ, ರತ್ನಮ್ಮ ಶೆಡ್ತಿ, ಆಶಾ ಶೆಡ್ತಿ ಹಾಗೂ ಸಾಧಮ್ಮ ಶೆಟ್ಟಿ ಇವರ ಕೃಷಿ ಬೆಳೆಗಳು ಭಾಗಶ: ಹಾನಿಗೀಡಾಗಿದ್ದು ಲಕ್ಷಾಂತರ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.
ಮರ್ಣೆ ಗ್ರಾಮದ ಸುಂದರ ನಾಯ್ಕಾ ಇವರ ಜಾನುವಾರು ಕೊಟ್ಟಿಗೆ ಭಾಗಶ ಹಾನಿಯಾಗಿದ್ದು 30,000ರೂ.ನಷ್ಟವಾಗಿದೆ. ಕುಂದಾಪುರ ತಾಲೂಕು ಉಪ್ಪಿನಕುದ್ರು ಗ್ರಾಮದ ರಾಧಾರ ಮನೆಗೆ 50ಸಾವಿರ, ವಕ್ವಾಡಿ ಗ್ರಾಮದ ನಾಗಪ್ಪ ಆಚಾರ್ರ ಮನೆಗೆ ಎಂಟು ಸಾವಿರ, ಕಾರ್ಕಳ ತಾಲೂಕು ನೀರೆ ಗ್ರಾಮದ ಶೇಖರ ಮನೆಗೆ 30ಸಾವಿರ ಹಾಗೂ ಹೆಬ್ರಿ ತಾಲೂಕು ಕೊರಗ ಪೂಜಾರಿ ಅವರ ಮನೆಗೆ 30,000ರೂ.ನಷ್ಟದ ಅಂದಾಜು ಮಾಡಲಾಗಿದೆ.