ಜಪಾನ್ ಕಾನ್ಸುಲೇಟ್ ಜನರಲ್ ಜತೆ ಸಚಿವ ಡಾ.ಅಶ್ವತ್ಥ ನಾರಾಯಣ ಚರ್ಚೆ

ಬೆಂಗಳೂರು, ಜು. 22: ರಾಜ್ಯದಲ್ಲಿ ಜಪಾನ್ ದೇಶದ ಬಂಡವಾಳ ಹೂಡಿಕೆಯೂ ಸೇರಿ ವಿವಿಧ ವಿಷಯಗಳ ಬಗ್ಗೆ ಬೆಂಗಳೂರಿನ ಜಪಾನ್ ಕಾನ್ಸುಲೇಟ್ ಜನರಲ್ ಅಕಿಕೋ ಸುಗಿಟಾ ಅವರೊಂದಿಗೆ ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಖಾತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ಮಾತುಕತೆ ನಡೆಸಿದರು.
ಶೀಘ್ರದಲ್ಲೇ ಬೆಂಗಳೂರು `ಟೆಕ್ ಸಮಿಟ್' ನಡೆಯುತ್ತಿದ್ದು, ಜಪಾನ್ ಆವಿಷ್ಕಾರ ಮೈತ್ರಿಕೂಟದ ಸದಸ್ಯ ರಾಷ್ಟ್ರವಾಗಿದೆ. ಟೆಕ್ ಸಮಿಟ್ನಲ್ಲಿ ಆ ದೇಶದ ಪಾಲುದಾರಿಕೆ ಬಗ್ಗೆಯೂ ಅವರು ಚರ್ಚೆ ನಡೆಸಿದರು. ಕೋವಿಡ್ಗೂ ಮುನ್ನ, ನಂತರವೂ ಕರ್ನಾಟಕ ಮತ್ತು ಜಪಾನ್ ನಡುವೆ ಕೈಗಾರಿಕೆ-ವಾಣಿಜ್ಯ ಸಂಬಂಧಗಳು ಬಲವಾಗಿದೆ.
ರಾಜ್ಯದಲ್ಲಿ ಟೊಯೋಟಾ, ಹೋಂಡಾ, ಫಿಜಿತ್ಸೂ, ಕೊಮತ್ಸೂ, ಹಿತಾಚಿ ಸೇರಿದಂತೆ 529 ಜಪಾನೀ ಕಂಪೆನಿಗಳು ನೆಲೆಯೂರಿವೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಹೂಡಿಕೆಯನ್ನು ಜಪಾನ್ನಿಂದ ಕರ್ನಾಟಕ ರಾಜ್ಯವೂ ನಿರೀಕ್ಷೆ ಮಾಡುತ್ತಿದೆ. ಈ ಬಗ್ಗೆಯೂ ಜಪಾನ್ ಕಾನ್ಸುಲೇಟ್ ಜನರಲ್ ಅವರ ಜತೆ ಚರ್ಚೆ ನಡೆಸಲಾಯಿತು ಎಂದು ಡಾ.ಅಶ್ವತ್ಥ ನಾರಾಯಣ ಇದೇ ವೇಳೆ ತಿಳಿಸಿದರು.





