ಅನುಮಾನಾಸ್ಪದ ತಿರುಗಾಟ: ಇಬ್ಬರ ವಶ
ಮಂಗಳೂರು, ಜು.24: ನಗರದ ಕಂಕನಾಡಿ-ಪಂಪ್ವೆಲ್ ರಸ್ತೆಯ ನಡುವಿನ ಮಳಿಗೆಗಳ ಸಮೀಪ ಶನಿವಾರ ಬೆಳಗ್ಗಿನ ಜಾವ ಇಬ್ಬರು ಅನುಮಾ ನಾಸ್ಪದವಾಗಿ ತಿರುಗಾಡುತ್ತಿದ್ದವರನ್ನು ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲತಃ ವಿಜಯನಗರ ಜಿಲ್ಲೆಯ ಚೆನ್ನಳ್ಳಿ ತಾಂಡ ನಿವಾಸಿ ಶಿವನಾಯಕ (44), ಗದಗ ಜಿಲ್ಲೆಯ ಅಣ್ಣಿಗೇರಿ ಸಾಸ್ವಿಹಳ್ಳಿ ನಿವಾಸಿ ರವಿ ವಾಲ್ಮೀಕಿ (40) ವಶಕ್ಕೆ ಪಡೆದವರು.
ಪ್ರಸ್ತುತ ಇಬ್ಬರೂ ಬಿ.ಸಿ.ರೋಡ್ನಲ್ಲಿ ವಾಸವಿದ್ದರು. ಕದ್ರಿ ಪೊಲೀಸರು ರಾತ್ರಿ ಗಸ್ತು ತಿರುಗುತ್ತಿದ್ದಾಗ ಪೊಲೀಸರನ್ನು ಕಂಡು ಓಡಲು ಆರಂಭಿಸಿ ದ್ದಾರೆ. ಅವರನ್ನು ಹಿಡಿದು ವಿಚಾರಿಸಿದಾಗ ಸಮರ್ಪಕವಾಗಿ ಉತ್ತರಿಸದೇ ಇದ್ದುದರಿಂದ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story