ಅಫ್ಘಾನ್ ಸೇನಾ ವರಿಷ್ಠ ಭಾರತ ಭೇಟಿ ರದ್ದು
ಕಾಬೂಲ್,ಜು.26: ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರ ಆಕ್ರಮಣವು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಅಪ್ಘಾನ್ ಸೇನಾ ವರಿಷ್ಠ ಜನರಲ್ ವಲಿ ಮೊಹಮ್ಮದ್ ಅಹ್ಮದಾಝಾಯಿ ಅವರ ಪೂರ್ವಯೋಜಿತ ಭಾರತ ಭೇಟಿಯನ್ನು ರದ್ದುಪಡಿಸಲಾಗಿದೆಎಂದು ಅಫ್ಘಾನ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಜನರಲ್ ಅಹ್ಮದ್ಝಾಯಿ ಅವರು ಮಂಗಳವಾರ ಹೊಸದಿಲ್ಲಿಗೆ ಆಗಮಿಸುವವರಿದ್ದರು. ಉಭಯದೇಶಗಳ ಸೇನಾ ಬಾಂಧವ್ಯವನ್ನು ಬಲಪಡಿಸುವ ಕುರಿತಾದ ಮಾರ್ಗೋಪಾಯಗಳ ಬಗ್ಗೆ ಅವರು ಚರ್ಚಿಸಲಿದ್ದಾರೆಂದು ವರದಿಯಾಗಿತ್ತು.ಅಫ್ಘಾನಿಸ್ತಾನದಿಂದ ಅಮೆರಿಕ ನೇತೃತ್ವದ ವಿದೇಶಿ ಪಡೆಗಳು ಹಿಂದೆಸರಿಯುತ್ತಿರುವ ಹಿನ್ನೆಲೆಯಲ್ಲಿ ತಾಲಿಬಾನ್ ಬಂಡುಕೋರರು ಆ ದೇಶದ ವಿವಿಧೆಡೆ ತಮ್ಮ ದಾಳಿಗಳನ್ನು ಹೆಚ್ಚಿಸಿದ್ದಾರೆ.
Next Story