ಕಂಬದಕೋಣೆ: ಮಳೆಗೆ ಮನೆ ಸಂಪೂರ್ಣ ಹಾನಿ
ಉಡುಪಿ, ಜು.27: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಬೈಂದೂರು ತಾಲೂಕು ಕಂಬದಕೋಣೆ ಗ್ರಾಮದ ಶಂಕರ ಆಚಾರಿ ಎಂಬವರ ವಾಸ್ತವ್ಯದ ಮನೆ ಗಾಳಿ-ಮಳೆಯಿಂದ ಸಂಪೂರ್ಣ ಹಾನಿಗೊಳಗಾಗಿದೆ. ಇದರಿಂದ ಮೂರು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಇದೇ ರೀತಿ ಮಳೆಯಿಂದ ಕಂಬದಕೋಣೆಯ ಶಮೀಲ್ ಹಮೀದ್ ಅವರ ಮನೆಗೆ 50,000ರೂ., ಕುಂದಾಪುರ ತಾಲೂಕು ಅಜ್ರಿ ಗ್ರಾಮದ ಗಿರಿಜಮ್ಮ ಶೆಟ್ಟಿ ಅವರ ಮನೆಗೆ 50,000ರೂ., ಗುಜ್ಜಾಡಿ ಗ್ರಾಮದ ಕೃಷ್ಣ ಮೇಸ್ತರ ಮನೆಯ ಜಾನುವಾರ ಕೊಟ್ಟಿಗೆಗೆ 40,000ರೂ., ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ವಸಂತ ಪೂಜಾರಿ ಅವರ ಮನೆಗೆ 30,000ರೂ. ನಷ್ಟ ಉಂಟಾಗಿದೆ.
ಕುಂದಾಪುರ ತಾಲೂಕು ಅಂಪಾರು ಗ್ರಾಮದ ಕುಸುಮ ಶೆಡ್ತಿ ಅವರ ತೋಟಗಾರಿಕಾ ಬೆಳೆಗೆ ಹಾನಿಯಾಗಿದ್ದು, 20,000ರೂ.ನಷ್ಟದ ಅಂದಾಜು ಮಾಡಲಾಗಿದೆ.
Next Story