ಕಾರ್ಕಳ: ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ
![ಕಾರ್ಕಳ: ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಕಾರ್ಕಳ: ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ](https://www.varthabharati.in/sites/default/files/images/articles/2021/08/4/301342-1628082649.jpg)
ಕಾರ್ಕಳ: ಶಾಸಕ ವಿ. ಸುನಿಲ್ ಕುಮಾರ್ ಸಚಿವ ಸಂಪುಟದಲ್ಲಿ ಸ್ಥಾನ ದೊರಕಿರುವುದು ಸಮಸ್ತ ಕಾರ್ಕಳ ಜನತೆಗೆ ಹರ್ಷ ತಂದಿದೆ. ಅವರ ಅವಧಿಯಲ್ಲಿ ನಾಡು ಹಾಗೂ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗಲಿ ಎಂದು ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ್ ಕಾಮತ್ ಹೇಳಿದರು.
ಶಾಸಕ ಸುನೀಲ್ ಸಚಿವರಾಗಿ ಪ್ರಮಾನವಚನ ಸ್ವೀಕರಿಸುವ ಮೊದಲು ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಬಿಬೆಪಿ ವತಿಯಿಂದ ಸಂಭ್ರಮಾಚರಣೆ ನಡೆಸಲಾಯಿತು. ಪಟಾಕಿ ಸಿಡಿಸಿ ಹರ್ಷ ವ್ಯಕ್ತ ಪಡಿಸಲಾಯಿತು. ಬಿಜೆಪಿ ಹಿರಿಯ ಮುಖಂಡ ಹಾಗೂ ವಕೀಲರ ಎಂ ಕೆ ವಿಜಯಕುಮಾರ್ ಮಾತನಾಡಿ, ಸ್ವರ್ಣ ಕಾರ್ಕಳ, ಸ್ವಚ್ಚ ಕಾರ್ಕಳದ ಕನಸು ಕಂಡಿರುವ ಸುನಿಲ್ ಕುಮಾರ್ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ಹಮ್ಮೆಯ ವಿಚಾರ. ಸಚಿವರಾಗಿ ಅವರು ಇನ್ನಷ್ಟು ಜನಪರ ಕೆಲಸ ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭ ನಗರ ಬಿಜೆಪಿ ಅಧ್ಯಕ್ಷ ರವೀಂದ್ರ ಮೊಯ್ಲಿ, ಟಿ.ಮಾಜಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಚಂದ್ರ ನಾಯಕ್, ಉದ್ಯಮಿ ರವಿಪ್ರ ಕಾಶ್ ಪ್ರಭು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.