Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತಿರುಚಿದ ಚಿತ್ರಗಳನ್ನು ಬಳಸಿದ ಆರೋಪ:...

ತಿರುಚಿದ ಚಿತ್ರಗಳನ್ನು ಬಳಸಿದ ಆರೋಪ: ವಿವಾದದ ಸುಳಿಯಲ್ಲಿ ಜೆಎನ್ ಯು ವಿಜ್ಞಾನಿಯ ಸಂಶೋಧನಾ ಲೇಖನ

ಪಬ್ ಪೀರ್ ವೆಬ್‌ ಸೈಟ್‌ ನಲ್ಲಿ ಲೇಖನಗಳಿಗೆ ಫ್ಲಾಗ್ ಮಾರ್ಕ್‌

ವಾರ್ತಾಭಾರತಿವಾರ್ತಾಭಾರತಿ4 Aug 2021 11:36 PM IST
share
ತಿರುಚಿದ ಚಿತ್ರಗಳನ್ನು ಬಳಸಿದ ಆರೋಪ: ವಿವಾದದ ಸುಳಿಯಲ್ಲಿ ಜೆಎನ್ ಯು ವಿಜ್ಞಾನಿಯ ಸಂಶೋಧನಾ ಲೇಖನ

ಹೊಸದಿಲ್ಲಿ,ಆ.2: ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಜವಾಹಲ್ ಲಾಲ್ ನೆಹರೂ ವಿವಿ ವಿಜ್ಞಾನಿ ಗೋವರ್ಧನ್ ದಾಸ್ ಸಹ ಲೇಖಕರಾಗಿದ್ದ 11 ಸಂಶೋಧನಾ ಲೇಖನಗಳನ್ನು ಕೃತ್ರಿಮವಾದ ಚಿತ್ರಗಳನ್ನು ಹೊಂದಿವೆಯೆಂಬ ಆರೋಪದಲ್ಲಿ ಫ್ಲಾಗ್ ಮಾಡಲಾಗಿದೆ.

ಸಂಶೋಧನಾ ಬರಹಗಳ ಕುರಿತ ಚರ್ಚೆ ಹಾಗೂ ವಿಮರ್ಶೆಗಾಗಿನ ಜಾಲತಾಣವಾದ ಪಬ್ಪೀರ್ನಲ್ಲಿ ಈ ಸಂಶೋಧನಾ ಪ್ರಬಂಧಗಳ ಪ್ರಕಟಣೆಯನ್ನು ಫ್ಲಾಗ್ ಮಾಡಲಾಗಿದೆ. ಸಾಮಾನ್ಯವಾಗಿ ಪಬ್ ಪೀರ್ ಜಾಲತಾಣವನ್ನು ವಿಜ್ಞಾನಿಗಳು ಪ್ರಕಟಿತ ಸಂಶೋಧನಾ ಪ್ರಬಂಧಗಳು, ಲೇಖನಗಳ ಬಗ್ಗೆ ಚರ್ಚಿಸಲು ಬಳಸಿಕೊಳ್ಳುತ್ತಾರೆ.

ಗೋವರ್ಧನ್ ದಾಸ್ ಅವರು ಸಹಲೇಖಕರಾಗಿರುವ 11 ಪ್ರಬಂಧಗಳಲ್ಲಿ ಹೆಚ್ಚಿನವು ಕ್ಷಯರೋಗಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳಾಗಿದ್ದವು. ಪ್ರಬಂಧದಲ್ಲಿ ಪ್ರಕಟಿಸಲಾದ ಸಂಶೋಧನೆಗಳಿಗೆ ಸಂಬಂಧಿಸಿದ ಪ್ರಯೋಗಗಳ ಚಿತ್ರಗಳು ಕೃತ್ರಿಮವಾದವು ಎಂಬ ಕಾರಣಕ್ಕಾಗಿ ಅವುಗಳನ್ನು ಫ್ಲಾಗ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಈ ಸಂಶೋಧನಾ ಪ್ರಬಂಧದಲ್ಲಿ ವಿಭಿನ್ನ ಪ್ರಯೋಗಗಳಿಗೆ ಒಂದೇ ಚಿತ್ರವನ್ನು ಬಳಸಿಕೊಂಡಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ ಎಂದು ವೆಬ್ಸೈಟ್ ಸಂದರ್ಶಿಸಿದ ಅನೇಕ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ತನ್ನ ಸಂಶೋಧನಾ ಬರಹದಲ್ಲಿ ಪ್ರಕಟಿಸಲಾದ ಚಿತ್ರಗಳು ಕೃತ್ರಿಮವೆಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಗೋವರ್ಧನ್ ದಾಸ್ ಅವರು, ತಾನು ಬಿಜೆಪಿ ನಿಷ್ಠನೆಂಬ ಕಾರಣಕ್ಕಾಗಿ ತನ್ನನ್ನು ಗುರಿಯಿಡಲಾಗಿದೆಯೆಂದು ಹೇಳಿದ್ದಾರೆ.

ತಾನು ಜೆಎನ್ಯು ವಿಶ್ವವಿದ್ಯಾನಿಲಯದ ನಿರ್ದೇಶಕ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಿದ ಬಳಿಕ ತನ್ನ ಸಂಶೋಧನಾ ಲೇಖನದ ವಿರುದ್ಧ ಅನಿಸಿಕೆಗಳು ವ್ಯಕ್ತವಾಗಿವೆ ಎಂದವರು ತಿಳಿಸಿದ್ದಾರೆ. ಯಾರಿಗಾದರೂ ಈ ಲೇಖನದ ಬಗ್ಗೆ ಸಮಸ್ಯೆಯಿದ್ದಲ್ಲಿ ಅವರು ನೇರವಾಗಿ ನನ್ನೊಂದಿಗೆ ವಿಜ್ಞಾನದ ಕುರಿತಾಗಿ ಮಾತನಾಡಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ನಾನು ಪ್ರಕಟಿಸಿದ ಚಿತ್ರಗಳಲ್ಲಿ ಯಾವುದೇ ಪ್ರಮಾದವಿಲ್ಲ. ಆದಾಗ್ಯೂ, ಈ ಚಿತ್ರಗಳನ್ನು ವಿದ್ಯಾರ್ಥಿಗಳೇ ಸಂಗ್ರಹಿಸಿದ್ದರು ಎಂದವರು ತಿಳಿಸಿದ್ದಾರೆ.

ಸಂಶೋಧನಾ ಪ್ರಬಂಧದ ಇನ್ನೋರ್ವ ಸಹ ಬರಹಗಾರರಾದ ವೇದ್ ಪ್ರಕಾಶ್ ದ್ವಿವೇದಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಫ್ಲಾಗ್ ಮಾಡಲಾದ ಒಂದು ಸಂಶೋಧನಾ ಲೇಖನದಲ್ಲಿ ಮಾನವ ಸಹಜ ತಪ್ಪುಗಳಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಈ ಲೇಖನವು ಪಿಎಲ್ಓಎಸ್ ಪ್ಯಾಥೊಜೆನ್ಸ್ ಎಂಬ ಪತ್ರಿಕೆ ಯಲ್ಲೂ ಪ್ರಕಟವಾಗಿದೆ. ಆ ನಿಯತಕಾಲಿಕವನ್ನು ನಾವು ಸಂಪರ್ಕಿಸಿದ್ದು, ಆಗಿರುವ ಪ್ರಮಾದದ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದವರು ಹೇಳಿದ್ದಾರೆ.

ಕ್ಷಯ ರೋಗದ ವಿರುದ್ಧ ರಕ್ಷಣೆಗೆ ಬಳಸಲಾಗುವ ಬಿಸಿಜಿ ಲಸಿಕೆಯನ್ನು ಕೋವಿಡ್ ಸೋಂಕು ತಡೆಗಟ್ಟಲೂ ಬಳಸಬಹುದೆಂದು ಗೋಬರ್ಧನ್ ದಾಸ್ ಅವರು ಕಳೆದ ವರ್ಷ ಪ್ರಸ್ತಾಪಿಸಿರುವುದು ವಿವಾದಕ್ಕೆ ಕಾರಣವಾಗಿತ್ತು.

ಫ್ಲಾಗ್ಡ್ ಎಂದರೇನು?

  

ಜಾಲತಾಣಗಳಲ್ಲಿ ಪ್ರಕಟವಾದ ಲೇಖನಗಳು, ವಿಷಯಗಳು, ಸಂಶೋಧನಾ ಬರಹಗಳು ಅಪರಿಪೂರ್ಣವೆಂದು ಅನಿಸಿದಲ್ಲಿ ಅಥವಾ ಅವುಗಳ ವಿಶ್ವಸನೀಯತೆಯ ಬಗ್ಗೆ ಸಂದೇಹವಿದ್ದಲ್ಲಿ ಅಥವಾ ಆ ಲೇಖನದಲ್ಲಿ ಇನ್ನಷ್ಟು ಪರಿಷ್ಕರಣೆಯ ಅಗತ್ಯವಿದೆಯೆಂದು ಕಂಡುಬಂದಲ್ಲಿ ಅಂತಹ ಲೇಖನಗಳ ಮುಂದೆ ಧ್ವಜದ (ಫ್ಲಾಗ್) ಚಿಹ್ನೆಯನ್ನು ಪ್ರದರ್ಶಿಸಲಾಗುತ್ತದೆ. ಇದನ್ನು ಫ್ಲಾಗ್ಡ್ ಎಂದು ಕರೆಯಲಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X