ಸಿಎಂ ರಾಷ್ಟ್ರ ವಿರೋಧಿಯೇ: ಕೆ.ಎಸ್.ಈಶ್ವರಪ್ಪಗೆ ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು, ಆ. 6: `ಸಚಿವ ಕೆ.ಎಸ್.ಈಶ್ವರಪ್ಪ ಅವರೇ, ನಿಮ್ಮ ಮಾತಿನ ಅರ್ಥ ಈಗಿನ ಸಿಎಂ ರಾಷ್ಟ್ರ ವಿರೋಧಿಯೇ!? ಇದು ಆಪರೇಷನ್ ಕಮಲದ ಅನೈತಿಕ ಸರಕಾರ ಎಂಬುದನ್ನ ಒಪ್ಪಿಕೊಳ್ಳುತ್ತಾ, ಹೊರಗಿನವರ ಬೆಂಬಲದಲ್ಲಿದೆ ಈ ಸರಕಾರ ಎಂದಿದ್ದೀರಿ. ಬಿಜೆಪಿಯಲ್ಲಿ ವಲಸಿಗರನ್ನು `ಹೊರಗಿನವರು' ಎಂಬ ಭಾವನೆಯಲ್ಲಿಯೇ ಕಾಣಲಾಗುತ್ತಿದೆ ಎನ್ನಲು ಈ ಮಾತು ಪುಷ್ಠಿ ಕೊಡುತ್ತದೆ!' ಎಂದು ಕಾಂಗ್ರೆಸ್ ಟೀಕಿಸಿದೆ.
ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, `ಮುಂದಿನ ಬಾರಿ ರಾಷ್ಟ್ರೀಯ ವ್ಯಕ್ತಿ ಸಿಎಂ ಆಗುತ್ತಾರೆ' ಎಂಬ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರಾಷ್ಟ್ರ ವಿರೋಧಿಯೇ? ಎಂದು ಖಾರವಾಗಿ ಪ್ರಶ್ನಿಸಿದೆ.
`ದಲಿತರನ್ನು ಸಿಎಂ ಮಾಡಿಲ್ಲ, ದಲಿತರನ್ನ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿಲ್ಲ, ಸಂಪುಟದಲ್ಲಿ ದಲಿತರಿಗೆ ಪ್ರಾತಿನಿಧ್ಯವಿಲ್ಲ, ದಲಿತರಿಗೆ ಪಕ್ಷದಲ್ಲಿ ಜಾಗವಿಲ್ಲ, ದಲಿತರನ್ನು ತುಳಿಯುವುದನ್ನೇ ತನ್ನ ಮುಖ್ಯ ಅಜೆಂಡಾ ಮಾಡಿಕೊಂಡಿರುವ ಬಿಜೆಪಿ ದಲಿತರ ಏಳಿಗೆಗೆ ಶ್ರಮಿಸಿದ ಕಾಂಗ್ರೆಸ್ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ' ಎಂದು ವಾಗ್ದಾಳಿ ನಡೆಸಿದೆ.
`ಬಿಜೆಪಿ, ಕಾಂಗ್ರೆಸ್ ಪಕ್ಷದ ಬಗ್ಗೆ ಚಿಂತಿಸಿದ್ದರ ಅರ್ಧದಷ್ಟು ತಮ್ಮದೇ ಪಕ್ಷದ ಬಗ್ಗೆ ಗಮನ ಹರಿಸಿದ್ದರೆ ಬಿಎಸ್ವೈ ಸಿಎಂ ಆಗಿಯೇ ಇರುತ್ತಿದ್ದರು! ಇನ್ನಾದರೂ ನಿಮ್ಮ ತಟ್ಟೆಯಲ್ಲಿನ ಹೆಗ್ಗಣದತ್ತ ಚಿತ್ತ ಹರಿಸಿ, ಇಲ್ಲದಿದ್ದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಮನೆಯ ದಾರಿ ಹಿಡಿಯಬೇಕಾದೀತು!. ಸಂಪುಟ ನೋಡಿದರೆ ದಲಿತ ವಿರೋಧಿ ಬಿಜೆಪಿ ಎಂದು ತಿಳಿಯುತ್ತದೆ' ಎಂದು ಕಾಂಗ್ರೆಸ್, ಬಿಜೆಪಿಗೆ ಎಚ್ಚರಿಕೆ ನೀಡಿದೆ
`ಹಿಂದೆಂದೂ ಸಂಸತ್ತಿನ ಮೆಟ್ಟಿಲು ತುಳಿಯದ ಮೋದಿಯವರಿಗೆ ಇದರ ಅರಿವಿಲ್ಲದಿರಬಹುದು, ಆದರೆ ಈಗ ಆಡಳಿತದಲ್ಲಿರುವ ನರೇಂದ್ರ ಮೋದಿಗೆ ಹಿಂದೆ ತಮ್ಮದೇ ಪಕ್ಷದ ಮಾತುಗಳನ್ನ ನೆನಪಿಸಿಕೊಳ್ಳಲಿ. ಸರಕಾರ ಬಯಸಿದಂತೆ ಚರ್ಚೆ ಆಗುವುದಕ್ಕಿಂತ ದೇಶದ ಪ್ರಶ್ನೆಗಳಿಗೆ ಧ್ವನಿಯಾಗಿರುವ ವಿಪಕ್ಷಗಳು ಬಯಸಿದ ಚರ್ಚೆ ಮಾಡಿ ಬಿಜೆಪಿ ತನ್ನ ತಾಕತ್ತು ಪ್ರದರ್ಶಿಸಲಿ' ಎಂದು ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ವಿಡಿಯೋವೊಂದನ್ನು ಕಾಂಗ್ರೆಸ್ ಟ್ವಿಟರ್ ನಲ್ಲಿ ಶೇರ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.
'@ikseshwarappaಅವರೇ, ನಿಮ್ಮ ಮಾತಿನ ಅರ್ಥ ಈಗಿನ ಸಿಎಂ ರಾಷ್ಟ್ರ ವಿರೋಧಿಯೇ!?
— Karnataka Congress (@INCKarnataka) August 6, 2021
ಇದು ಆಪರೇಷನ್ ಕಮಲದ ಅನೈತಿಕ ಸರ್ಕಾರ ಎಂಬುದನ್ನ ಒಪ್ಪಿಕೊಳ್ಳುತ್ತಾ, ಹೊರಗಿನವರ ಬೆಂಬಲದಲ್ಲಿದೆ ಈ ಸರ್ಕಾರ ಎಂದಿದ್ದೀರಿ.
ಬಿಜೆಪಿಯಲ್ಲಿ ವಲಸಿಗರನ್ನು 'ಹೊರಗಿನವರು' ಎಂಬ ಭಾವನೆಯಲ್ಲಿಯೇ ಕಾಣಲಾಗುತ್ತಿದೆ ಎನ್ನಲು ಈ ಮಾತು ಪುಷ್ಠಿ ಕೊಡುತ್ತದೆ! pic.twitter.com/clsytALwIv







