Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಗೊಂದಲಗಳ 'ಕಲಿವೀರ'...!

ಗೊಂದಲಗಳ 'ಕಲಿವೀರ'...!

ಶಶಿಕರ ಪಾತೂರುಶಶಿಕರ ಪಾತೂರು8 Aug 2021 12:05 AM IST
share
ಗೊಂದಲಗಳ ಕಲಿವೀರ...!

ಬಾಹುಬಲಿಯಂತಹ ಸಿನೆಮಾ ನೋಡಿ ಸ್ಫೂರ್ತಿ ಪಡೆಯುವುದರಲ್ಲಿ ತಪ್ಪಿಲ್ಲ. ಆದರೆ ಅಂತಹದ್ದೊಂದು ಚಿತ್ರಕ್ಕೆ ಮಾಡಿರಬಹುದಾದ ತಯಾರಿಯ ಒಂದಂಶವೂ ಇರದೆ ದೊಡ್ಡ ಪ್ರಾಜೆಕ್ಟ್‌ಗೆ ಕೈ ಹಾಕಿದರೆ ಏನಾಗುತ್ತದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ‘ಕಲಿವೀರ’ ಸಿನೆಮಾ!

ಚಿತ್ರದ ಆರಂಭದಲ್ಲಿ ನಾಯಕ ಕಲಿ ಪಾತ್ರಧಾರಿ ನಗರದಲ್ಲಿರುತ್ತಾನೆ. ಆತನ ವೇಷಭೂಷಣ, ವರ್ತನೆ ಕಂಡರೆ ಹಳ್ಳಿ ಗಮಾರನಂತೆ ಕಾಣುತ್ತಾನೆ. ಕಲಿಗೆ ನಗರದ ಕಳ್ಳನೋರ್ವ ಸ್ನೇಹಿತನಾಗುತ್ತಾನೆ. ಹಾಗೆ ಜೈಲು ಸೇರುವ ಆತನನ್ನು ಬಿಡಿಸಲು ಹುಡುಗಿಯೋರ್ವಳು ಪೊಲೀಸ್ ಸ್ಟೇಷನ್ ಒಳಗೆ ಕಾಲಿಡುತ್ತಾಳೆ. ಇಷ್ಟರಲ್ಲಾಗಲೇ ನಿಮಗೆ ನಾನು ‘ಜೋಗಿ’ ಸಿನೆಮಾ ಕತೆ ಹೇಳುತ್ತಿರುವ ಹಾಗೆ ಅನಿಸಿರಬೇಕಲ್ಲ?! ಮುಂದೆ ಒಂದಷ್ಟು ತಿರುವುಗಳಿವೆ. ಆತ ನಗರಕ್ಕೆ ಬಂದಿದ್ದೇಕೆ ಎನ್ನುವ ವಿಚಾರದಲ್ಲಿ ಹಿಂದಿನ ಕತೆ ಹಳ್ಳಿಯೊಂದರಲ್ಲಿ ತೆರೆದುಕೊಳ್ಳುತ್ತದೆ. ಹಳ್ಳಿಯಲ್ಲಿ ನಡೆಯುವ ಕತೆ ಏನು ಎನ್ನುವ ಬಗ್ಗೆ ಇಲ್ಲಿ ಹೇಳುವುದಿಲ್ಲ. ಕುತೂಹಲಕ್ಕಾಗಿಯಾದರೂ ಒಮ್ಮೆ ಸಿನೆಮಾ ನೋಡಿ ಎಂದರೆ ಅದೂ ತಪ್ಪಾಗಬಹುದು. ಯಾಕೆಂದರೆ ಪೂರ್ತಿ ಚಿತ್ರಕತೆಯಲ್ಲಿ ಅಧ್ಯಯನದ ಕೊರತೆ ಎದ್ದು ಕಾಣುತ್ತದೆ. ಕಾಲ್ಪನಿಕ ಕತೆಯಾದರೂ ಅದಕ್ಕೊಂದು ಆಸ್ವಾದನೆಯ ಗುಣ ಇರಬೇಕಾಗುತ್ತದೆ. ಇಲ್ಲಂತೂ ಕಲ್ಪನೆಯ ಜೊತೆಗೆ ಇತಿಹಾಸವನ್ನು ತಳಕು ಹಾಕುವ ಪ್ರಯತ್ನವೂ ನಡೆದಿದೆ. ಘಜನಿ, ಘೋರಿ ಹೆಸರನ್ನು ಎಳೆದು ತಂದು ಪ್ರೇಕ್ಷಕರ ಧಾರ್ಮಿಕ ಭಾವನೆ ಕೆರಳಿಸುವ ಸಣ್ಣ ಪ್ರಯತ್ನ ಬಿಟ್ಟರೆ ಚಿತ್ರ ಸಾಧಿಸುವುದೇನೂ ಇಲ್ಲ.

ಕಲಿವೀರನಾಗಿ ನಟಿಸಿರುವ ಏಕಲವ್ಯ ಅವರಲ್ಲಿ ನಟನೆಗಿಂತ ಕಸರತ್ತು ಹೆಚ್ಚು. ನಿರ್ದೇಶಕ ಅವಿಯವರು ಅದನ್ನೇ ಹೈಲೈಟ್ ಮಾಡಿ ಸುಲಭದ ದಾರಿ ನೋಡಿಕೊಂಡಿದ್ದಾರೆ. ಕಲಿಯ ಮುಖಭಾವಕ್ಕಿಂತ ದೇಹಭಾಷೆ ಮನದಲ್ಲಿ ಉಳಿಯುತ್ತದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಕಲಿಯ ಪ್ರೇಯಸಿ ಬುಡಕಟ್ಟಿನ ಯುವತಿಯಾಗಿ ಕಾಣಿಸಿದ್ದಾರೆ ಚಿರಶ್ರೀ ಅಂಚನ್. ಕಲಾತ್ಮಕ ಪಾತ್ರವೇನೋ ಎನ್ನುವಂತೆ ಕಳೆಗೆಡಿಸಿ ಪಾತ್ರದ ಕುಲಗೆಡಿಸಲಾಗಿದೆ. ಕೇಸರಿ ಎನ್ನುವ ಆ ಪಾತ್ರವನ್ನು ಗುಡ್ಡಬೆಟ್ಟದಲ್ಲಿ ಓಡಾಡಿಸಿದ್ದು ಬಿಟ್ಟರೆ ನಟನೆಗಾಗಿ ಒಳ್ಳೆಯ ಅವಕಾಶ ನೀಡಲಾಗಿಲ್ಲ. ನಗರದ ಹುಡುಗಿಯ ಪಾತ್ರ ನಿರ್ವಹಿಸಿರುವ ಪಾವನಾ ಗೌಡ ಆ ಮಟ್ಟಿಗೆ ಅದೃಷ್ಟವಂತೆ. ಚಿತ್ರದಲ್ಲಿನ ಪಾತ್ರಗಳಲ್ಲೇ ಒಂದಷ್ಟು ಶೇಡ್ಸ್ ಹೊಂದಿರುವ ಗಟ್ಟಿ ಕ್ಯಾರೆಕ್ಟರ್ ಅವರದು. ಹಳ್ಳಿಯ ಬುಡಕಟ್ಟು ನಿವಾಸಿಗಳ ‘ಒಡೆಯ’ನಾಗಿ ಟಿ.ಎಸ್. ನಾಗಾಭರಣ ನಟಿಸಿದ್ದಾರೆ. ಮಾತಿಗೊಮ್ಮೆ ಕಣ್ಣರಳಿಸುವುದು ಬಿಟ್ಟರೆ ಅವರಿಗೂ ಹೆಚ್ಚು ಕೆಲಸಗಳಿಲ್ಲ. ಅದರಲ್ಲೂ ಬುಡಕಟ್ಟು ಜನರ ಒಡೆಯ ಸಂಸ್ಕೃತ ಶ್ಲೋಕ ಹೇಳಿ ಪೂಜಿಸುವುದು ನಿರ್ದೇಶಕರ ಕಲ್ಪನೆಯ ಕಿರೀಟಕ್ಕೊಂದು ಗರಿ ಎಂದೇ ಹೇಳಬಹುದು.

ಆರಂಭದಿಂದ ಪೊಲೀಸ್ ಅಧಿಕಾರಿಯಾಗಿ ಕಾಣಿಸಿರುವ ನಟ ಮುನಿಯವರು ಕ್ಲೈಮ್ಯಾಕ್ಸ್ ನಲ್ಲಿ ‘‘ನನ್ನ ಪಾತ್ರ ಏನು ಕಾಮಿಡಿಯನ್ನಾ..?’’ ಎಂದು ಹೇಳುವ ಸಂಭಾಷಣೆ ನಿಜಕ್ಕೂ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತಿದೆ! ಆ ಸಂಭಾಷಣೆ ಮತ್ತೋರ್ವ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ನೀನಾಸಂ ಅಶ್ವಥ್ ಅವರಿಗೂ ಸಲ್ಲುತ್ತದೆ. ಅವರ ಜೋಡಿಯಾಗಿ ನಟಿಸಿರುವ ಅನಿತಾ ಭಟ್ ಶಾರ್ಪ್ ಶೂಟರ್ ಪಾತ್ರಕ್ಕೆ ಈಗಾಗಲೇ ಸಾಕಷ್ಟು ಹೇಟರ್ಸ್ ಸೃಷ್ಟಿಯಾಗಿರಬಹುದು. ಇರುವುದರಲ್ಲಿ ಡ್ಯಾನಿಯ ರೌಡಿ ಪಾತ್ರ ಮತ್ತು ಮುಹಮ್ಮದ್ ಗಡಾಫಿ ಎನ್ನುವ ಉಗ್ರನಾಗಿ ನಟಿಸಿದ ಸೂರ್ಯನಾರಾಯಣ ರಾವ್ ಅವರ ನೋಟಗಳು ಚಿತ್ರ ಮುಗಿದ ಬಳಿಕವೂ ಕಾಡುತ್ತವೆ. ವಿ ಮನೋಹರ್ ಸಂಗೀತದಲ್ಲಿನ ಎರಡು ಹಾಡುಗಳು ಚಿತ್ರದ ಆಕರ್ಷಕ ಅಂಶವಾಗಿವೆ.
ಕಲಿವೀರ ಚಿತ್ರದಲ್ಲೊಂದು ಆನೆಯಿದೆ. ಗಜಪಡೆಯಂತೆ ಕಲಾವಿದರೂ ಇದ್ದಾರೆ. ಆದರೆ ಒಂದು ಅಚ್ಚುಕಟ್ಟಿನ ಮೆರವಣಿಗೆ ಕಾಣದಿರುವಲ್ಲಿ ಮಾವುತನ ವೈಫಲ್ಯ ಎದ್ದು ಕಾಣುತ್ತದೆ.

ತಾರಾಗಣ: ಏಕಲವ್ಯ, ಪಾವನಾ ಗೌಡ, ಚಿರಶ್ರೀ ಅಂಚನ್
ನಿರ್ದೇಶನ: ಅವಿ
ನಿರ್ಮಾಣ: ರಾಜು ಪೂಜಾರ್, ಶ್ರೀನಿವಾಸ್

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X