ಅಪಘಾತ: ಕಾರು ಸಂಪೂರ್ಣ ಜಖಂ: ಐವರು ಅಪಾಯದಿಂದ ಪಾರು
![ಅಪಘಾತ: ಕಾರು ಸಂಪೂರ್ಣ ಜಖಂ: ಐವರು ಅಪಾಯದಿಂದ ಪಾರು ಅಪಘಾತ: ಕಾರು ಸಂಪೂರ್ಣ ಜಖಂ: ಐವರು ಅಪಾಯದಿಂದ ಪಾರು](https://www.varthabharati.in/sites/default/files/images/articles/2021/08/8/301849-1628438027.jpg)
ಬ್ರಹ್ಮಾವರ, ಆ.8: ಹೇರೂರು ಸೇತುವೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದ್ದು, ಅದರಲ್ಲಿದ್ದ ಐವರು ಪವಾಡ ಸದೃಶವಾಗಿ ಪಾರಾಗಿರುವ ಬಗ್ಗೆ ವರದಿಯಾಗಿದೆ.
ಅಪಘಾತದಲ್ಲಿ ಮಂಗಳೂರು ಯೆಯ್ಯಾಡಿಯ ಗಾಯತ್ರಿ ಶೆಟ್ಟಿ ಎಂಬವರು ಸಣ್ಣ ಪುಟ್ಟ ಗಾಯಗೊಂಡು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿ ಯಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಉಳಿದಂತೆ ಅವರ ಅಣ್ಣನ ಮಗ ಅನಿಶ್ ಶೆಟ್ಟಿ ಹಾಗೂ ಪರಿಚಯದ ಶಶಾಂಕ್, ರಕ್ಷಿತ್, ಶಶಾಂಕ್ ಪೂಜಾರಿ ಎಂಬವರ ಯಾವುದೇ ಗಾಯಗೊಂಡಿಲ್ಲ ಎಂದು ತಿಳಿದುಬಂದಿದೆ.
ಇವರು ಮಂಗಳೂರಿನಿಂದ ಕಾರಿನಲ್ಲಿ ಬ್ರಹ್ಮಾವರಕ್ಕೆ ಹೋಗುತ್ತಿದ್ದು, ಈ ವೇಳೆ ಹಿಂದಿನಿಂದ ಬಂದ ಲಾರಿಯು ಕಾರಿನ ಹಿಂಬದಿಯ ಬಂಪರಿಗೆ ಡಿಕ್ಕಿ ಹೊಡೆಯಿತು. ಇದರ ಪರಿಣಾಮ ಕಾರು ಒಮ್ಮೆಲೆ ಮುಂದಕ್ಕೆ ಹೋಗಿ ವಾಪಾಸು ತಿರುಗಿ ನಿಂತು ಸೇತುವೆಗೆ ಡಿಕ್ಕಿ ಹೊಡೆದಿದ್ದು, ಕಾರು, ಲಾರಿ ಮತ್ತು ಸೇತುವೆಯ ಮಧ್ಯೆ ಸಿಕ್ಕಿ ಸಂಪೂರ್ಣ ಜಖಂ ಗೊಂಡಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.