ಆ.15ರಂದು ಉಚಿತ ಆರೋಗ್ಯ, ಮಧುಮೇಹ ತಪಾಸಣಾ ಶಿಬಿರ
ಉಡುಪಿ, ಆ.9: ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಆ.15ರಂದು ಬೆಳಿಗ್ಗೆ 9:30ಕ್ಕೆ ರೆಡ್ಕ್ರಾಸ್ ಸಂಸ್ಥೆಯ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ ನೇತೃತ್ವದಲ್ಲಿ ಉಚಿತ ಆರೋಗ್ಯ, ನೇತ್ರಚಿಕಿತ್ಸೆ ಮತ್ತು ಮಧುಮೇಹ ತಪಾಸಣಾ ಶಿಬಿರವನ್ನು ಅಜ್ಜರಕಾಡಿನ ಭಾರತೀಯ ರೆಡ್ಕ್ರಾಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಮಧುಮೇಹ ತಜ್ಞ ಡಾ. ಅಶೋಕ್ ಕುಮಾರ್ ವೈ.ಜಿ, ಕೀಲು ಮತ್ತು ಮೂಳೆ ತಜ್ಞ ಡಾ. ಉಮೇಶ್ ಪ್ರಭು, ಕುಟುಂಬ ವೈದ್ಯ ಡಾ.ಅರವಿಂದ ನಾಯಕ್, ಕಿವಿ, ಮೂಗು ಮತ್ತು ಗಂಟಲು ತಜ್ಞ ಡಾ.ಶಿವಕುಮಾರ್ ಹಿರೇಮಠ್ ಹಾಗೂ ಮನಶಾಸ್ತ್ರಜ್ಞರು, ಶ್ರವಣ ಮತ್ತು ಮಾತಿನ ತಜ್ಞರು, ಫಿಸಿಯೋಥೆರಪಿಸ್ಟ್ಗಳು ತಪಾಸಣೆ ನಡೆಸಲಿದ್ದು, ಸಾರ್ವಜನಿಕರು ಹಾಗೂ ವಿಕಲಚೇತನ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆಯುವಂತೆ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story