ಚೆಂಬರಿಕ: ದೋಣಿ ಮುಳುಗಿ ಮೀನುಗಾರ ಮೃತ್ಯು
![ಚೆಂಬರಿಕ: ದೋಣಿ ಮುಳುಗಿ ಮೀನುಗಾರ ಮೃತ್ಯು ಚೆಂಬರಿಕ: ದೋಣಿ ಮುಳುಗಿ ಮೀನುಗಾರ ಮೃತ್ಯು](https://www.varthabharati.in/sites/default/files/images/articles/2021/08/10/302021-1628578864.gif)
ಕಾಸರಗೋಡು, ಆ.10:ಮೀನುಗಾರಿಕೆ ಸಂದರ್ಭದಲ್ಲಿ ದೋಣಿ ನದಿಯಲ್ಲಿ ಮುಳುಗಿ ಮೀನುಗಾರ ಮೃತಪಟ್ಟ ಘಟನೆ ಉದುಮ ಸಮೀಪದ ಹೊಳೆಯಲ್ಲಿ ಇಂದು ಮುಂಜಾನೆ ನಡೆದಿದೆ.
ಚೆಂಬರಿಕ ನಿವಾಸಿ ಅಹ್ಮದ್ ಯಾನೆ ಆಮು(60) ಮೃತಪಟ್ಟವರು. ಅವರು ಇಂದು ಬೆಳಗ್ಗೆ ನದಿಯಲ್ಲಿ ಮೀನು ಹಿಡಿಯಲು ಬಲೆ ಬೀಸುತ್ತಿದ್ದಾಗ ಆಕಸ್ಮಿಕವಾಗಿ ದೋಣಿ ಮಗುಚಿ ಈ ದುರಂತ ಸಂಭವಿಸಿದೆ. ಪರಿಸರವಾಸಿಗಳು ಕೂಡಲೇ ಅಹ್ಮದ್ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story