ಪ್ರಾಕೃತಿಕ ವಿಕೋಪದ ಪರಿಹಾರಧನ ಚೆಕ್ ವಿತರಣೆ
ಉಡುಪಿ, ಆ.10: ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕಿನ 4 ಕುಟುಂಬಗಳಿಗೆ 2,04,072ರೂ. ಮೊತ್ತದ ಪರಿಹಾರ ಧನದ ಚೆಕ್ನ್ನು ಇಂದು ಚಾಂತಾರು ಗ್ರಾಪಂನಲ್ಲಿ ವಿತರಿಸಲಾಯಿತು.
ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಅಮೃತಾ ಆರ್.ಶೆಟ್ಟಿ, ಉಪ್ಪೂರು ಗ್ರಾಮದ ಸಂಜೀವ ಸೇರಿಗಾರ್ತಿ, ಮಟಪಾಡಿ ಗ್ರಾಮದ ಮಹಾಬಲ ನಾಯರಿ, 34ನೇ ಕುದಿ ಗ್ರಾಮದ ಕೃಷ್ಣಯ್ಯ ಶೆಟ್ಟಿ ಅವರಿಗೆ ಒಟ್ಟು 2,04,072ರೂ. ಮೊತ್ತದ ಚೆಕ್ನ್ನು ಶಾಸಕ ಕೆ.ರಘುಪತಿ ಭಟ್ ವಿತರಿಸಿದರು.
ಈ ಸಂದರ್ಭದಲ್ಲಿ ಉಪ್ಪೂರು ಗ್ರಾಪಂ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್, ಮಾಜಿ ಸದಸ್ಯ ನಾರಾಯಣ್ ಶೆಟ್ಟಿ ಹಾಗೂ ಬ್ರಹ್ಮಾವರ ತಹಶೀಲ್ದಾರ ರಾಜಶೇಖರ್, ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ ಭಟ್ ಉಪಸ್ಥಿತರಿದ್ದರು.
Next Story





