ಗಂಗೊಳ್ಳಿ, ಆ.11: ಹಣದ ಅಡಚಣೆಯಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡ ಹೊಸಾಡು ಗ್ರಾಮದ ಕಂಚಗೋಡು ಭಗತ್ ನಗರ ನಿವಾಸಿ ವೆಂಕಟೇಶ್ ಎಂಬವರ ಮಗ ರವಿ (19) ಎಂಬವರು ಆ.10ರಂದು ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.