ಬಂದರ್ ಕಂದಕ್ನಲ್ಲಿ ರಕ್ತದಾನ ಶಿಬಿರ-ಆರೋಗ್ಯ ತಪಾಸಣೆ
![ಬಂದರ್ ಕಂದಕ್ನಲ್ಲಿ ರಕ್ತದಾನ ಶಿಬಿರ-ಆರೋಗ್ಯ ತಪಾಸಣೆ ಬಂದರ್ ಕಂದಕ್ನಲ್ಲಿ ರಕ್ತದಾನ ಶಿಬಿರ-ಆರೋಗ್ಯ ತಪಾಸಣೆ](https://www.varthabharati.in/sites/default/files/images/articles/2021/08/14/302565-1628926376.gif)
ಮಂಗಳೂರು, ಆ.14: ದೇಶದ 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕಂದಕ್ ಮುಸ್ಲಿಂ ಜಮಾಅತ್ (ರಿ) ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರವು ನಗರದ ಕಂದಕ ಪ್ರದೇಶದ ಬದ್ರಿಯಾ ಕಾಲೇಜು ಆವರಣದಲ್ಲಿ ಶನಿವಾರ ನಡೆಯಿತು.
ಧರ್ಮಗುರುಗಳಾದ ಬದ್ರಿಯಾ ಜುಮಾ ಮಸೀದಿಯ ಹಸೈನಾರ್ ಮುಸ್ಲಿಯಾರ್, ರಾಜಲಕ್ಷ್ಮೀ ದೇವಸ್ಥಾನದ ಅರ್ಚಕ ನಾರಾಯಣ ಭಟ್, ರೊಸಾರಿಯೋ ಚರ್ಚ್ನ ಫಾ.ವಿಕ್ಟರ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಿದರು.
ಬದ್ರಿಯಾ ಕಾಲೇಜಿನ ಪ್ರಾಂಶುಪಾಲ ಯೂಸುಫ್ ಡಿ., ಬದ್ರಿಯಾ ವಿದ್ಯಾಸಂಸ್ಥೆಯ ಸಂಚಾಲಕರ ಹಾಶಿರ್ ಪಿ.ಸಿ., ಯೆನೆಪೊಯ ವೈದ್ಯ್ಯಾಧಿಕಾರಿ ಡಾ.ಪ್ರಚೇತ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ವೈದ್ಯಾಧಿಕಾರಿ ಆ್ಯಂಟೊನಿ, ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್, ಉದ್ಯಮಿ ಮೊಹಿದಿನ್ ಉಸ್ಮಾನ್, ಕಂದಕ್ ಪ್ರದೇಶದ ಹಿರಿಯರಾದ ಕೆ.ಪಿ.ಮೊಹಿದಿನ್, ಕಂದಕ್ ಮುಸ್ಲಿಂ ಜಮಾಅತಿನ ಸದಸ್ಯರಾದ ಅಬ್ದುಸ್ಸಲಾಂ ಕಂದಕ್, ಶರೀಫ್ ಕಂದಕ್, ಸಿದ್ದೀಕ್ ಕಂದಕ್, ಖಾಸಿಂ ಕಂದಕ್, ಮೊಹ್ಸಿನ್ ಕಂದಕ್, ಅಶ್ರಫ್ ಕಂದಕ್, ಸಲಾಂ ಕುತ್ತಾರ್, ಅಜ್ಮಲ್, ಮುಸ್ತಫ, ಅಲ್ತಾಫ್, ಸಾಲಿ, ಫಯಾಝ್, ರಿಯಾಝ್ ಕೆ.ಪಿ, ಮುಖ್ತಾರ್, ಆರಿಫ್, ಸತ್ತಾರ್, ಆಸಿಫ್ ಅಬೂಬಕರ್ ಉಪಸ್ಥಿತರಿದ್ದರು.
ಹುಸೈನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.