ಬೆಂಗಳೂರು: ಅನುವಾದ ಕಮಟ್ಟಕ್ಕೆ ಸಚಿವ ಸುನೀಲ್ ಕುಮಾರ್ ಭೇಟಿ

ಬೆಂಗಳೂರು, ಆ.14: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಭವನದ ಕನ್ನಡ ಜಗಲಿಯಲ್ಲಿ ಆಯೋಜಿಸಿರುವ ಮೂರು ದಿನಗಳ ಕನ್ನಡ ಅನುವಾದ ಕಮ್ಮಟಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಇಂದು ಭೇಟಿ ನೋಡಿದರು.
ಈ ವೇಳೆ ಸಚಿವರು ಕಮ್ಮಟದಲ್ಲಿ ಭಾಗವಹಿಸಿದವರೊಂದಿಗೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದರು. ಅನುವಾದ ಕಮ್ಮಟದಲ್ಲಿದ್ದ 26 ಅಭ್ಯರ್ಥಿಗಳು ಹಾಗೂ ಸಂಯೋಜಕರೊಂದಿಗೆ ಕೆಲ ಕಾಲ ಕಳೆದ ಸಚಿವರು, ಕನ್ನಡದ ನಿರಂತರತೆಗಾಗಿ, ಇಂತಹ ಕಮ್ಮಟಗಳು ಕಾರ್ಯಾಗಾರಗಳು ಸಾಗುತ್ತಲೇ ಇರಬೇಕು, ಕನ್ನಡ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇರಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡ ಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಡುಗಡೆಯಾಗಿರುವ ಸಭಾಂಗಣವನ್ನು ನವೀಕರಿಸಿ ಕನ್ನಡ ಜಗಲಿ ಹೆಸರಿನಲ್ಲಿ ನಿನ್ನೆಯಷ್ಟೇ ಉದ್ಘಾಟಿಸಿ ಅನುವಾದ ಕಮ್ಮಟವೊಂದನ್ನು ಪ್ರಾರಂಭಿಸಲಾಗಿತ್ತು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರು ಹಾಗೂ ಅನುವಾದ ಕಮ್ಮಟದ ಸಂಯೋಜಕ ಪ್ರೊ.ಅಬ್ದುಲ್ ರೆಹಮಾನ್ ಪಾಷ ಹಾಗೂ ರೋಹಿತ್ ಚಕ್ರತೀರ್ಥ ಕಮ್ಮಟದಲ್ಲಿ ಉಪಸ್ಥಿತರಿದ್ದರು.






.gif)
.gif)

