ಅವಿನಾಶ್ ಆಳ್ವ
ಮಂಗಳೂರು, ಆ.14: ಕುಪ್ಪೆಪದವು ನಿವಾಸಿ ಅವಿನಾಶ್ ಆಳ್ವ (32) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ನಗರದಲ್ಲಿ ಒಳಾಂಗಣ ವಿನ್ಯಾಸ ಗುತ್ತಿಗೆದಾರರಾಗಿರುವ ಇವರು, ನಾನಾ ಸಂಘಟನೆಗಳಲ್ಲಿ ಗುರುತಿಸಿಕೊಂಡು, ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ತಂದೆ, ತಾಯಿ, ಸಹೋದರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಅಂತಿಮ ದರ್ಶನ: ಮಾಜಿ ಸಚಿವ ಬಿ. ರಮಾನಾಥ ರೈ, ಯುವಕಾಂಗ್ರೆಸ್ ಮುಖಂಡ ಮಿಥುನ್ ರೈ, ಕಾರ್ಪೊರೇಟರ್ಗಳಾದ ಪ್ರವೀಣ್ಚಂದ್ ಆಳ್ವ, ಎ.ಸಿ. ವಿನಯರಾಜ್, ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಮೃತರ ಅಂತಿಮದರ್ಶನ ಪಡೆದರು.
Next Story