ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಹಯೋಗದಲ್ಲಿ ಬಡವರಿಗೆ ಔಷದಿ ಕಾರ್ಡ್ ವಿತರಣೆ
![ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಹಯೋಗದಲ್ಲಿ ಬಡವರಿಗೆ ಔಷದಿ ಕಾರ್ಡ್ ವಿತರಣೆ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಹಯೋಗದಲ್ಲಿ ಬಡವರಿಗೆ ಔಷದಿ ಕಾರ್ಡ್ ವಿತರಣೆ](https://www.varthabharati.in/sites/default/files/images/articles/2021/08/15/302721-1629028900.jpg)
ಕಾಪು, ಆ.15: ಪೊಲಿಪು ಖುವ್ವತ್ತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿ ಯೇಶನ್ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಇದರ ಸಹಯೋಗದಲ್ಲಿ ಬಡ ಜನರಿಗೆ ಔಷದಿ ಕಾರ್ಡ್ ವಿತರಣೆ ಹಾಗೂ ವಿವಿಧ ಸೌಲಭ್ಯಗಳ ಯೋಜನೆಯ ಕಾರ್ಯಕ್ರಮವು ರವಿವಾರ ಕಾಪು ಜೇಸಿ ಭವನದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಪೊಲಿಪು ಜಾಮಿಯಾ ಮಸೀದಿಯ ಖಾಝಿ ಪಿ.ಬಿ ಅಹ್ಮದ್ ಮುಸ್ಲಿಯಾರ್ ಕಾಪು ಉಸ್ತಾದ್ ದುವಾ ನೆರವೇರಿಸಿದರು. ಮಲಬಾರ್ ಗೋಲ್ಡ್ ಮುಖ್ಯಸ್ಥ ಹಫೀಝ್ ರಹ್ಮಾನ್ ಹಾಗೂ ರಾಘವೇಂದ್ರ ನಾಯಕ್ ಜನರಿಗೆ ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ಪೊಲಿಪು ಜಾಮಿಯಾ ಮಸೀದಿ ಅಧ್ಯಕ್ಷ ಎಚ್.ಅಬ್ದುಲ್ಲಾ, ಸಂಸ್ಥೆಯ ಅಧ್ಯಕ್ಷ ಬಶೀರ್ ಜನಪ್ರಿಯ, ಪುರಸಭೆ ಸದಸ್ಯ ಇಮ್ರಾನ್ ಮಜೂರ್ ಹಾಗೂ ಸಂಸ್ಥೆಯ ಸಲೆಹಗಾರರಾದ ಹುಸೈನಾರ್ ಹಾಗೂ ರಝಕ್ ಕೆ.ಎಂ. ಮಲಬಾರ್ ಗೋಲ್ಡ್ ಸಂಸ್ಥೆಯ ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ ಉಪಸ್ಥಿತರಿದ್ದರು. ಜಲೀಲ್ ಹಾಗೂ ಬಾಶಿತ್ ಕಾರ್ಯಕ್ರಮ ನಿರೂಪಿಸಿದರು.
Next Story