ಶಿರೂರು ಶ್ರೀಲಕ್ಷ್ಮೀವರ ತೀರ್ಥರ ತೃತೀಯ ಆರಾಧನೆ

ಉಡುಪಿ, ಆ.15: ಉಡುಪಿ ಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥರ ತೃತೀಯ ಆರಾಧನಾ ಮಹೋತ್ಸವ ಉಡುಪಿಯ ರಾಘವೇಂದ್ರ ಮಠದಲ್ಲಿ ಜರಗಿತು.
ಆರಾಧನಾ ಮಹೋತ್ಸವವಕ್ಕೆ ಪೂರ್ವಭಾವಿಯಾಗಿ ನಿರಂತರ ಎಂಟು ದಿನಗಳ ಕಾಲ ಋಕ್ಸಂಹಿತಾ ಪಾರಾಯಣ ಜರಗಿತ್ತು. ಈ ಪಾರಾಯಣದ ಸಂದರ್ಭದಲ್ಲಿ ಕಲಶದಲ್ಲಿದ್ದ ಜೇನು ಮತ್ತು ತುಪ್ಪಗಳಿಂದ ಪಾರಾಯಣದ ಎಂಟನೇ ದಿನದಂದು ಮೃತ್ತಿಕಾ ವೃಂದಾವನಕ್ಕೆ ಅಭಿಷೇಕ ನಡೆಸಲಾ ಯಿತು. ಆರಾಧನೆಯ ದಿನದಂದು ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಹಾಗೂ ಗಣೇಶ ಆಚಾರ್ಯರ ನೇತೃತ್ವದಲ್ಲಿ ಶ್ರೀವಿಷ್ಣುಸಸ್ರನಾಮ ಯಜ್ಞ ಸಂಪನ್ನಗೊಂಡಿತು.
ಬಳಿಕ ಶ್ರೀಲಕ್ಷ್ಮೀವರತೀರ್ಥರ ಮೃತ್ತಿಕಾ ವೃಂದಾವನಕ್ಕೆ ಕಲಶದ ತೀರ್ಥಗಳಿಂದ ವಿಶೇಷ ಅಭಿಷೇಕ ನಡೆಸಿ ಮಹಾ ಮಂಗಳಾರತಿ ಸಲ್ಲಿಸಲಾ ಯಿತು. ಶ್ರೀಕೇಮಾರು ಸಾಂದಿಪಿನಿ ಮಠದ ಶ್ರೀಈಶವಿಠಲದಾಸರು ಶುಭಾಶೀರ್ವಾಗೈದರು.
ಕಾರ್ಯಕ್ರಮದಲ್ಲಿ ಹರಿಕೃಷ್ಣ ಪುನರೂರು, ರಾಘವೇಂದ್ರ ಮಠದ ಪ್ರಧಾನ ಅರ್ಚಕ ಅಪ್ಪಣ್ಣ ಆಚಾರ್ಯ, ಜಯತೀರ್ಥ ಆಚಾರ್ಯ, ಜಯರಾಮ ರಾವ್, ಮಡಾಮಕ್ಕಿ ಅನಂತ ತಂತ್ರಿ, ಲಕ್ಷ್ಮೀನಾರಾಯಣ ತಂತ್ರಿ, ವೇದಮೂರ್ತಿ ರಾಘವೇಂದ್ರ ಭಟ್, ಡಾ.ವ್ಯಾಸರಾಜ ತಂತ್ರಿ, ಶ್ರೀಲಕ್ಷ್ಮೀವರ ತೀರ್ಥರ ಪೂರ್ವಾಶ್ರಮದ ಸಹೋದರರಾದ ಪಿ.ವಾದಿರಾಜ ಆಚಾರ್ಯ, ಪಿ. ಶ್ರೀನಿವಾಸ ಆಚಾರ್ಯ, ವೃಜನಾಥ ಆಚಾರ್ಯ, ನಾವೂರು ವಾದಿರಾಜ ಆಚಾರ್ಯ, ರಘುರಾಮ ಬಲ್ಲಾಳ್, ಪಿ.ಲಾತವ್ಯ ಆಚಾರ್ಯ ಹಾಗೂ ಇತರರು ಉಪಸ್ಥಿತ ರಿದ್ದರು.







