ಬೊಳ್ಳೂರು: ಎಸ್ಕೆಎಸ್ಸೆಸ್ಸೆಫ್ ನಿಂದ ಸ್ವಾತಂತ್ರ್ಯ ದಿನಾಚರಣೆ
![ಬೊಳ್ಳೂರು: ಎಸ್ಕೆಎಸ್ಸೆಸ್ಸೆಫ್ ನಿಂದ ಸ್ವಾತಂತ್ರ್ಯ ದಿನಾಚರಣೆ ಬೊಳ್ಳೂರು: ಎಸ್ಕೆಎಸ್ಸೆಸ್ಸೆಫ್ ನಿಂದ ಸ್ವಾತಂತ್ರ್ಯ ದಿನಾಚರಣೆ](https://www.varthabharati.in/sites/default/files/images/articles/2021/08/16/302827-1629097600.gif)
ಹಳೆಯಂಗಡಿ, ಆ.16: ಎಸ್ಕೆಎಸ್ಸೆಸ್ಸೆಫ್ ಬೊಳ್ಳೂರು ಘಟಕದ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದ್ವಜಾರೋಹಣ ಹಾಗೂ ಎಸ್ಕೆಎಸ್ಸೆಸ್ಸೆಫ್ ಫ್ರೀಡಂ ಸ್ಕ್ವಾರ್ ಕಾರ್ಯಕ್ರಮ ಬೊಳ್ಳೂರಿನ ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ಮುಂಭಾಗದಲ್ಲಿ ಜರುಗಿತು.
ಅಲ್ಹಾಜ್ ಮುಹಮ್ಮದ್ ಅಝ್ಹರ್ ಫೈಝಿ ಬೊಳ್ಳೂರು ಧ್ವಜಾರೋಹಣಗೈದರು. ಜಿ.ಎಂ.ಹನೀಫ್ ದಾರಿಮಿ ಇಂದಿರಾ ನಗರ ಮುಖ್ಯ ಭಾಷಣ ಮಾಡಿದರು. ಫ್ರೀಡಂ ಸ್ಕ್ವಾರ್ ಪ್ರತಿಜ್ಞೆಯನ್ನು ಎಸ್ಕೆಎಸ್ಸೆಸ್ಸೆಫ್ ಹಳೆಯಂಗಡಿ ಘಟಕದ ಪ್ರಧಾನ ಕಾರ್ಯದರ್ಶಿ ಝೈನುದ್ದಿನ್ ರೈಲ್ವೆ ಬೋಧಿಸಿದರು, ಸಿರಾಜುದ್ದೀನ್ ಫೈಝಿ ಬೊಳ್ಳೂರು ಸ್ವಾಗತಿಸಿದರು,
ಈ ಸಂದರ್ಭ ಬೊಳ್ಳೂರು ಮಸೀದಿಯ ಅಧ್ಯಕ್ಷ ಹಾಜಿ ಎ.ಕೆ.ಜೀಲಾನಿ, ಉಪಾಧ್ಯಕ್ಷ ಅಬ್ದುರ್ರಹ್ಮಾನ್, ಕಾರ್ಯದರ್ಶಿ ಸುಲೈಮಾನ್ ಕೊಪ್ಪಲ, ಎಸ್ಕೆಎಸ್ಸೆಸ್ಸೆಫ್ ಹಳೆಯಂಗಡಿ ಘಟಕದ ಅಧ್ಯಕ್ಷ ಯಹ್ಯಾ ಪರಂಗಿಬೊಟ್ಟು, ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ಅಧ್ಯಕ್ಷ ಬಿ.ಇ.ಮುಹಮ್ಮದ್, ಸಮಸ್ತ ಜಂಇಯ್ಯತುಲ್ ಮುಅಲ್ಲಿಮೀನ್ ಸುರತ್ಕಲ್ ರೇಂಜ್ ಕೋಶಾಧಿಕಾರಿ ಬಿ.ಎಂ.ಇಬ್ರಾಹೀಂ, ಗ್ರಾಪಂ ಸದಸ್ಯ ಅಬ್ದುಲ್ ಅಝೀಝ್, ಲಿಯಾವುಲ್ ಇಸ್ಲಾಂ ದಫ್ ಕಮಿಟಿ ಅಧ್ಯಕ್ಷ ಉಮರುಲ್ ಫಾರೂಕ್, ಕಾರ್ಯದರ್ಶಿ ಹುಸೈನಬ್ಬ ಬೊಳ್ಳೂರು, ಎಸ್ಕೆಎಸ್ಸೆಸ್ಸೆಫ್ ಬೊಳ್ಳೂರು ಅಧ್ಯಕ್ಷ ಅಲ್ಪಾಝ್ ಬೊಳ್ಳೂರು, ಕಾರ್ಯದರ್ಶಿ ಅಲ್ಪಾಝ್ ಇಂದಿರಾ ನಗರ ಹಾಗೂ ಇತರರು ಉಪಸ್ಥಿತರಿದ್ದರು.