Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ್ರಧಾನಿ ಹುದ್ದೆಗೆ ಅತ್ಯುತ್ತಮ ಆಯ್ಕೆ:...

ಪ್ರಧಾನಿ ಹುದ್ದೆಗೆ ಅತ್ಯುತ್ತಮ ಆಯ್ಕೆ: ಒಂದು ವರ್ಷದಲ್ಲಿ ಶೇ.66ರಿಂದ ಶೇ.24ಕ್ಕೆ ಕುಸಿತ ಕಂಡ ಪ್ರಧಾನಿ ಮೋದಿಯ ಬೆಂಬಲ

ವಾರ್ತಾಭಾರತಿವಾರ್ತಾಭಾರತಿ17 Aug 2021 7:34 PM IST
share
ಪ್ರಧಾನಿ ಹುದ್ದೆಗೆ ಅತ್ಯುತ್ತಮ ಆಯ್ಕೆ: ಒಂದು ವರ್ಷದಲ್ಲಿ ಶೇ.66ರಿಂದ ಶೇ.24ಕ್ಕೆ ಕುಸಿತ ಕಂಡ ಪ್ರಧಾನಿ ಮೋದಿಯ ಬೆಂಬಲ

ಹೊಸದಿಲ್ಲಿ,ಆ.17: ಮುಂದಿನ ಪ್ರಧಾನಿ ಹುದ್ದೆಗೆ ಮೊದಲ ಆಯ್ಕೆಯಾಗಿ ಮೋದಿಯವರಿಗೆ ಕಳೆದ ವರ್ಷದವರೆಗೂ ಇದ್ದ ಶೇ.66ರಷ್ಟು ಬೆಂಬಲ ಈಗ ಶೇ.24ಕ್ಕೆ ಕುಸಿದಿದೆ ಎಂದು ಇಂಡಿಯಾ ಟುಡೇ ಮ್ಯಾಗಝಿನ್ ನಡೆಸಿರುವ ‘ಮೂಡ್ ಆಫ್ ದಿ ನೇಷನ್(ದೇಶದ ಮನಃಸ್ಥಿತಿ)’ ಸಮೀಕ್ಷೆಯು ಬಹಿರಂಗಗೊಳಿಸಿದೆ.

ಇದಕ್ಕೆ ಪ್ರಮುಖ ಕಾರಣ ಕೋವಿಡ್ ಎರಡನೇ ಅಲೆ,ಕೇಂದ್ರವು ಅದನ್ನು ನಿರ್ವಹಿಸಿದ್ದ ರೀತಿ ಮತ್ತು ಅದರಿಂದಾಗಿ ಉದ್ಭವಿಸಿದ ಸಂಬಂಧಿತ ಮತ್ತು ಗಂಭೀರ ಆರ್ಥಿಕ ಕಳವಳಗಳಾಗಿವೆ.
 
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಧಾನಿ ಹುದ್ದೆಗೆ ಎರಡನೇ ಅತ್ಯಂತ ಜನಪ್ರಿಯ ಆಯ್ಕೆಯಾಗಿದ್ದು,ಶೇ.11ರಷ್ಟು ಜನರು ಅವರನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಹುದ್ದೆಗೆ ಶೇ.10ರಷ್ಟು ಜನರ ಮೊದಲ ಆಯ್ಕೆಯಾಗಿದ್ದಾರೆ. ಆದಿತ್ಯನಾಥ ಮತ್ತು ರಾಹುಲ್ ಅವರ ಜನಪ್ರಿಯತೆಯಲ್ಲಿ ಏರಿಕೆಯಾಗಿದ್ದು,ಕಳೆದ ವರ್ಷ ಇದು ಅನುಕ್ರಮವಾಗಿ ಶೇ.3 ಮತ್ತು ಶೇ.8 ಆಗಿತ್ತು. ಆದರೆ ತಮ್ಮ ರಾಜ್ಯಗಳ ಜನರ ವೌಲ್ಯಮಾಪನದ ಆಧಾರದಲ್ಲಿ ಮುಖ್ಯಮಂತ್ರಿಗಳ ಶ್ರೇಯಾಂಕಗಳ ಪಟ್ಟಿಯಲ್ಲಿ ಆದಿತ್ಯನಾಥ ಏಳನೇ ಸ್ಥಾನದಲ್ಲಿದ್ದಾರೆ. 

ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶೇ.42ರಷ್ಟು ಮತಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಒಡಿಶಾದ ನವೀನ ಪಟ್ನಾಯಕ್, ಕೇರಳದ ಪಿಣರಾಯಿ ವಿಜಯನ್,ಮಹಾರಾಷ್ಟ್ರದ ಉದ್ಧವ ಠಾಕ್ರೆ,ಪ.ಬಂಗಾಳದ ಮಮತಾ ಬ್ಯಾನರ್ಜಿ ಮತ್ತು ಅಸ್ಸಾಮಿನ ಹಿಮಂತ ಬಿಸ್ವ ಶರ್ಮಾ ಅವರು ಪಟ್ಟಿಯಲ್ಲಿ ಆದಿತ್ಯನಾಥಗಿಂತ ಮೇಲಿನ ಸ್ಥಾನದಲ್ಲಿದ್ದಾರೆ. ಮೊದಲ ಹತ್ತರಲ್ಲಿ ಬಿಜೆಪಿಯ ಕೇವಲ ಇಬ್ಬರು ಮುಖ್ಯಮಂತ್ರಿಗಳು ಸ್ಥಾನ ಪಡೆದಿದ್ದಾರೆ. ಉತ್ತರ ಪ್ರದೇಶದ ಕೇವಲ ಶೇ.29ರಷ್ಟು ಜನರು ಆದಿತ್ಯನಾಥರ ಅರ್ಹತೆಗೆ ಮಣೆ ಹಾಕಿರುವುದು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿಗೆ ಶುಭಶಕುನವೆಂಬಂತೆ ಕಂಡುಬರುತ್ತಿಲ್ಲ.

ಇಂಡಿಯಾ ಟುಡೇ ಮ್ಯಾಗಝಿನ್ನಲ್ಲಿ ಪ್ರಕಟವಾಗಿರುವ ಸಮೀಕ್ಷೆಯ ಅಂಶಗಳು ಅದು ನಡೆಸುತ್ತಿರುವ ಸುದ್ದಿ ವಾಹಿನಿಯಲ್ಲಿ ಪ್ರೈಮ್ ಟೈಂ ಚರ್ಚೆಯ ಪ್ರಮುಖ ವಿಷಯಗಳಾಗಿದ್ದವು. ಈ ನಡುವೆ ಹಲವಾರು ನೆಟ್ಟಿಗರು ಸಮೀಕ್ಷಾ ವರದಿಯ ಬಗ್ಗೆ ಟ್ವೀಟಿಸಿದ್ದಾರೆ.
 
ಪ್ರಸಕ್ತ ಕಾಲಘಟ್ಟದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಭಾರತೀಯರ ಪ್ರಮುಖ ಕಳವಳಗಳಾಗಿವೆ ಎನ್ನುವುದನ್ನು ಮ್ಯಾಗಝಿನ್ ಕವರ್ ಪೇಜ್ ಬೆಟ್ಟು ಮಾಡಿದೆ. ಆರ್ಥಿಕತೆ ಹದಗೆಡಲಿದೆ ಎಂದು ಭಾವಿಸಿರುವ ಜನರ ಸಂಖ್ಯೆ 2021ರ ಜನವರಿಯಲ್ಲಿ ಶೇ.17ರಷ್ಟಿದ್ದುದು ಕೇವಲ ಆರು ತಿಂಗಳುಗಳಲ್ಲಿ ಶೇ.32ಕ್ಕೆ ಏರಿಕೆಯಾಗಿದೆ.
 
ಸಮೀಕ್ಷೆಯಲ್ಲಿ ಕಂಡು ಬಂದಿರುವ ಧೋರಣೆಗಳ ಬಗ್ಗೆ ಟ್ವೀಟಿಸಿರುವ ಪತ್ರಕರ್ತ ಶಿವಂ ವಿಜ್ ಅವರು, ಮೋದಿಯವರ ಉತ್ತರಾಧಿಕಾರಿಯಾಗಿ ಪ್ರಧಾನಿ ಅಭ್ಯರ್ಥಿಯಾಗಿ ಬಿಜೆಪಿಯ ಸಂಭಾವ್ಯ ಆಯ್ಕೆಗೆ ಸಂಬಂಧಿಸಿದಂತೆ ಆದಿತ್ಯನಾಥ ಅವರು ಹಾಲಿ ಗೃಹಸಚಿವ ಅಮಿತ್ ಶಾ ಅವರಿಗೆ ತುಂಬ ಹತ್ತಿರದಲ್ಲಿದ್ದಾರೆ ಎಂದು ಬೆಟ್ಟು ಮಾಡಿದ್ದಾರೆ.
 
ಕೇವಲ ಶೇ.28ರಷ್ಟು ಜನರು ಮೋದಿ ಪ್ರಧಾನಿಯಾದ ಬಳಿಕ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದೆ ಎಂದು ಭಾವಿಸಿದ್ದಾರೆ ಎಂದು ವಿಜ್ ವಿಶ್ಲೇಷಿಸಿದ್ದಾರೆ.
 
ಸರಕಾರವು ಹಣದುಬ್ಬರ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಹೇಳುವವರ ಸಂಖ್ಯೆ 2021 ಜನವರಿಯಲ್ಲಿ ಶೇ.35ರಷ್ಟು ಇದ್ದುದು ಈಗ ಶೇ.60ಕ್ಕೆ ಏರುವುದರೊಂದಿಗೆ ಪ್ರಾಮಾಣಿಕ ಉದ್ದೇಶವನ್ನು ಹೊಂದಿದ್ದಾರೆ ಎಂಬ ಮೋದಿಯವರ ತಥಾಕಥಿತ ಟ್ರೇಡ್ಮಾರ್ಕ್ ಕುಸಿದಿದೆ ಎಂದು ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಅಂಶಗಳು ತೋರಿಸುತ್ತಿವೆ ಎನ್ನುವುದನ್ನು ವಿಜ್ ಪ್ರಮುಖವಾಗಿ ಬಿಂಬಿಸಿದ್ದಾರೆ.

ಸರಕಾರದ ಪ್ರಯತ್ನಗಳ ಬಗ್ಗೆ ಮಾತ್ರವಲ್ಲ,ಅದು ಮುಂದಿರಿಸಿರುವ ಅಂಕಿಅಂಶಗಳ ಬಗ್ಗೆಯೂ ಶಂಕೆಗಳು ವ್ಯಕ್ತವಾಗಿವೆ. ಅಧಿಕೃತ ಅಂಕಿಅಂಶಗಳಿಗಿಂತ ಹೆಚ್ಚಿನ ಜನರು ಕೋವಿಡ್ ಪೀಡಿತರಾಗಿದ್ದಾರೆ ಎಂದು ಶೇ.71ರಷ್ಟು ಜನರು ಹೇಳಿದ್ದಾರೆ.
 
ಭಾರತದಲ್ಲಿ ಎರಡನೇ ಅಲೆ ಹರಡಲು ಬೃಹತ್ ಸಮಾವೇಶಗಳು ಕಾರಣವಾಗಿದ್ದವು ಎಂದು ಶೇ.27ರಷ್ಟು ಜನರು ಪ್ರತಿಕ್ರಿಯಿಸಿದ್ದರೆ,ಶೇ.10ರಷ್ಟು ಜನರು ಇದಕ್ಕೆ ರಾಜ್ಯ ಸರಕಾರಗಳನ್ನು ದೂರಿದ್ದಾರೆ. ಶೇ.13ರಷ್ಟು ಜನರು ಕೇಂದ್ರವನ್ನು ಮಾತ್ರ ಹೊಣೆಯಾಗಿಸಿದ್ದರೆ ಶೇ.44ರಷ್ಟು ಜನರು ಕೇಂದ್ರ ಮತ್ತು ರಾಜ್ಯ ಸರಕಾರ ಎರಡನ್ನೂ ದೂರಿದ್ದಾರೆ.

According to the just-published India Today Mood of the Nation survey, only 24% think Modi is best choice for next PM. The second choice at 11% is Yogi Adityanath. Modi as the first choice has gone down sharply from 66% a year ago to 24% now. pic.twitter.com/wKPcIfM4bd

— Shivam Vij (@DilliDurAst) August 16, 2021

According to the latest India Today Mood of the Nation Survey, those disapproving of Modi’s handling of Covid went up from about 23% in August 2020 to about 49% in August 2021.

Only 49% after the horrors of second wave. Should have been 93%. pic.twitter.com/4pPFkKkH1s

— Shivam Vij (@DilliDurAst) August 16, 2021

According to the latest India Today Mood of the Nation survey, inflation has overtaken unemployment as the top economic concern for Indians in the space of just 6 months. pic.twitter.com/jfi2T258Z9

— Shivam Vij (@DilliDurAst) August 16, 2021

More than Covid, Indians are worried about inflation and unemployment. Problems that don’t subside like Covid death waves. pic.twitter.com/ppRVFM6oG3

— Shivam Vij (@DilliDurAst) August 16, 2021

This is going to set a lot of tongues wagging! According to the latest India Today Mood of the Nation Survey, Amit Shah is still the number 1 choice as Modi’s successor in BJP, but sharply dropping ranks. Yogi Adityanath closing in! pic.twitter.com/gpS086gD7e

— Shivam Vij (@DilliDurAst) August 16, 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X