ಬೆಳಗಾವಿ: ಪೊಲೀಸರ ಗೌರವ ವಂದನೆ ಸ್ವೀಕರಿಸಲು ಸಿಎಂ ಬಸವರಾಜ ಬೊಮ್ಮಾಯಿ ಹಿಂದೇಟು
ಬೆಳಗಾವಿ: ಪೊಲೀಸರ ಗೌರವ ವಂದನೆ ಸ್ವೀಕರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದೇಟು ಹಾಕಿದ ಘಟನೆ ಬೆಳಗಾವಿ ನಗರದ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಶನಿವಾರ ನಡೆದಿದೆ.
ಶನಿವಾರ ಬೆಳಗಾವಿಯಲ್ಲಿನ ಕೋವಿಡ್ ಮತ್ತು ಪ್ರವಾಹ ಪರಿಹಾರದ ಸ್ಥಿತಿಗತಿ ಪರಿಶೀಲನೆಗೆ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಅವರಿಗೆ ಪೊಲೀಸ್ ಗೌರವ ವಂದನೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ದಿನಕ್ಕೆ ಒಂದು ಬಾರಿ ಈ ವ್ಯವಸ್ಥೆ ಮಾಡಿ ಸಾಕು. ಹತ್ತಾರು ಕಡೆಗಳಲ್ಲಿ ಪೊಲೀಸರ ಗೌರವ ವಂದನೆ ಬೇಡ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ ನೀಡಿದ್ದಾರೆಂದು ಗೊತ್ತಾಗಿದೆ.
ಸುವರ್ಣ ವಿಧಾನಸೌಧದ ಸಿಬ್ಬಂದಿ ಗೌರವ ವಂದನೆ ವ್ಯವಸ್ಥೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಹೀಗಾಗಿ, ಗೌರವ ವಂದನೆ ಸ್ವೀಕರಿಸಿದ ಬೊಮ್ಮಾಯಿ ಬಳಿಕ ಸಭೆಗೆ ತೆರಳಿದ್ದಾರೆ. ಬಳಿಕ, ಬೆಳಗಾವಿ ಸುವರ್ಣಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿದ್ದು, ಕೊವಿಡ್ ಹಾಗೂ ನೆರೆ ಪರಿಹಾರ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.
Next Story