ಈಡಿ ವಿಚಾರಣೆಗಾಗಿ ದಿಲ್ಲಿಗೆ ಬಂದಿಲ್ಲ: ಶಾಸಕ ಝಮೀರ್ ಅಹ್ಮದ್
ಶಾಸಕ ಝಮೀರ್ ಅಹ್ಮದ್ (File photo)
ಬೆಂಗಳೂರು, ಆ.21: ಈಡಿ ದಾಳಿ ಪ್ರಕರಣ ಸಂಬಂಧ ನಾನು ಹೊಸದಿಲ್ಲಿಗೆ ಬಂದಿಲ್ಲ ಎಂದು ಶಾಸಕ ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಶನಿವಾರ ಹೊಸದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಡಿಯಿಂದ ನೋಟಿಸ್ ಕೂಡ ಬಂದಿಲ್ಲ. ಒಂದು ವೇಳೆ ನೋಟಿಸ್ ಬಂದಿದ್ದರೇ ನಾನೇಕೆ ಮುಚ್ಚಿಡಲಿ ಎಂದು ಪ್ರಶ್ನಿಸಿದರು.
ಈಡಿ ನೋಟಿಸ್ ನೀಡಿದರೆ ಪ್ರತಿಯನ್ನೆ ನಿಮಗೆ ತೋರಿಸುತ್ತಿದ್ದೆ. ಅಲ್ಲದೆ, ನಾನು ಖಾಸಗಿ ವಿಚಾರವಾಗಿ ಹೊಸದಿಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.
Next Story