ಅಸ್ತಿತ್ವ ಉಳಿಸಿಕೊಳ್ಳಲು ನಾಲಿಗೆ ಹರಿಬಿಡುವ ನಳಿನ್ ಕುಮಾರ್: ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟೀಕೆ
ಉಡುಪಿ, ಆ.24: ಪಕ್ಷದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಸದಾ ತನ್ನ ಹರಕು ನಾಲಿಗೆ ಯನ್ನು ಕಾಂಗ್ರೆಸ್ ವಿನಾಯಕರ ವಿರುದ್ಧ ಹರಿಬಿಡುತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ಕುಮಾರ್ ಕೊಡವೂರು ಟೀಕಿಸಿದ್ದಾರೆ.
ಬಹುಮತವೇ ಇಲ್ಲದ ತಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಹೇಗೆ ಬಂತು ಎಂಬ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಭ್ರಷ್ಟಾಚಾರದ ಮೂಲಕವೇ ಸರಕಾರ ರಚಿಸಿ ಅಧಿಕಾರಕ್ಕೆ ಬಂದವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದವರು ಹೇಳಿಕೆಯೊಂದರಲ್ಲಿ ಕಟುಕಿದರು.
ಪ್ರಧಾನಿ ಹುದ್ದೆ ಅಲಂಕರಿಸಿ ತಮ್ಮ ರಾಜನೀತಿಜ್ಞತೆ ಮತ್ತು ರಾಜಧರ್ಮದ ತಳಹದಿಯ ಪರಿಶುದ್ಧ ಆಡಳಿತದ ಮೂಲಕ ಈ ದೇಶದ ಸಮಗ್ರತೆ ಮತ್ತ ಸಾರ್ವಭೌಮತೆಯನ್ನು ಎತ್ತಿ ಹಿಡಿದು ಈ ಮಣ್ಣಿನ ಸವಾರ್ಂಗೀಣ ಅಭಿವೃದ್ಧಿಗಾಗಿ ದುಡಿದು ಮಡಿದ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಸೇರಿ ಕಳೆದ 60 ವಷರ್ ಈ ದೇಶವನ್ನಾಳಿದ ಕಾಂಗ್ರೆಸ್ಸಿನ ಯಾವುದೇ ಪ್ರಧಾನ ಮಂತ್ರಿಗಳನ್ನಾಗಲಿ, ನಾಯಕರನ್ನಾಗಲಿ, ಕನಿಷ್ಠ ಒಬ್ಬ ಕಾರ್ಯಕರ್ತನನ್ನು ಟೀಕಿಸುವ ಯೋಗ್ಯತೆ ಬಿಜೆಪಿ ರಾಜ್ಯಾದ್ಯಕ್ಷರಿಗಿಲ್ಲ ಎಂದವರು ಹೇಳಿದರು.
ದೇಶದ ಇತಿಹಾಸ ಅರಿಯದವರು ಇತಿಹಾಸ ಕೆದಕುವುದು ಬೇಡ ಎಂದ ಕೊಡವೂರು, ಕಾಂಗ್ರೆಸ್ ನಾಯಕರನ್ನು ಟೀಕಿಸುವ ಮೊದಲು ತನ್ನ ಪಕ್ಷದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ರಫೇಲ್ ಡೀಲ್ ಬಹುಕೋಟಿ ಕಮಿಷನ್ ಹಗರಣ ಹಾಗೂ ಹತ್ತು ಹಲವು ಭೂ ಹಗರಣ, ಲೈಂಗಿಕ ಹಗರಣಗಳಲ್ಲಿ ಜೈಲಿಗೆ ಹೋಗಿ ಬಂದ ತನ್ನವರ ಬಗ್ಗೆ ಹಾಗೂ ತನ್ನ ಪಕ್ಷದ ಸಾಚಾತನದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.







