ದಾದರ್- ಮಂಗಳೂರು ಜಂಕ್ಷನ್ ನಡುವೆ ಚೌತಿ ವಿಶೇಷ ರೈಲು
ಉಡುಪಿ, ಆ.27: ಗಣೇಶ ಚತುರ್ಥಿ ಸಂದರ್ಭದಲ್ಲಿ ಪ್ರಯಾಣಿಕರ ಬೇಡಿಕೆಯಂತೆ ಕೊಂಕಣ ರೈಲ್ವೆ, ಕೇಂದ್ರ ರೈಲ್ವೆಯ ಸಹಕಾರ ದೊಂದಿಗೆ ದಾದರ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ವಿಶೇಷ ರೈಲೊಂದನ್ನು ಓಡಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ನಂ.01267 ದಾದರ್-ಮಂಗಳೂರು ಜಂಕ್ಷನ್ ವಿಶೇಷ ರೈಲು ಸೆ.10ರಂದು ಶುಕ್ರವಾರ ಬೆಳಗ್ಗೆ 8:15ಕ್ಕೆ ದಾದರ್ನಿಂದ ನಿರ್ಗಮಿಸಲಿದ್ದು, ಮರುದಿನ ಬೆಳಗ್ಗೆ 6:30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಈ ರೈಲು ಒಟ್ಟು 18 ಕೋಚ್ಗಳನ್ನು ಹೊಂದಿರಲಿದೆ.
ಈ ರೈಲಿಗೆ ಪನ್ವೇಲ್, ರೋಹಾ, ವೀರ್, ಖೇಡ್, ಚಿಪ್ಳುಣ್, ಸಾವರ್ದ, ಅರಾವಳಿ ರೋಡ್, ಸಂಗಮೇಶ್ವರ ರೋಡ್, ರತ್ನಗಿರಿ, ಅಡಾವಳಿ, ರಾಯಪುರ್ ರೋಡ್, ವೈಭವ್ವಾಡಿ ರೋಡ್, ನಂದಗಾಂವ್ ರೋಡ್, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ಥೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಉಡುಪಿ, ಮುಲ್ಕಿ ಹಾಗೂ ಸುರತ್ಕಲ್ ಗಳಲ್ಲಿ ನಿಲುಗಡೆ ಇರಲಿದೆ.
Next Story





