ಜಲಜೀವನ್ ಮಿಷನ್ ಯೋಜನೆಯಡಿ ಕ್ಷೇತ್ರಕ್ಕೆ 33.72 ಕೋಟಿ ರೂ. ಬಿಡುಗಡೆ: ಶಾಸಕ ರಾಜೇಶ್ ನಾಯ್ಕ್
69 ಲಕ್ಷ ರೂ. ಅನುದಾನದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ
![ಜಲಜೀವನ್ ಮಿಷನ್ ಯೋಜನೆಯಡಿ ಕ್ಷೇತ್ರಕ್ಕೆ 33.72 ಕೋಟಿ ರೂ. ಬಿಡುಗಡೆ: ಶಾಸಕ ರಾಜೇಶ್ ನಾಯ್ಕ್ ಜಲಜೀವನ್ ಮಿಷನ್ ಯೋಜನೆಯಡಿ ಕ್ಷೇತ್ರಕ್ಕೆ 33.72 ಕೋಟಿ ರೂ. ಬಿಡುಗಡೆ: ಶಾಸಕ ರಾಜೇಶ್ ನಾಯ್ಕ್](https://www.varthabharati.in/sites/default/files/images/articles/2021/08/27/304321-1630086200.jpeg)
ಬಂಟ್ವಾಳ, ಆ.27: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಯೋಜನೆ ಯಡಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ 30 ಗ್ರಾಮ ಪಂಚಾಯತ್ ಗಳಿಗೆ 33.72 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಂಡಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
ಬಂಟ್ವಾಳ ಕ್ಷೇತ್ರದ ಮಾಣಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರಕಾರದ 69 ಲಕ್ಷ ರೂ. ಅನುದಾನದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಜನರ ಮನೆ ಮನೆಗೆ ನಳ್ಳಿ ನೀರನ್ನು ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭಿಸಿದ ಪ್ರಧಾನಿ ಅವರ ಗ್ರಾಮೀಣ ಜನರ ಮೇಲಿನ ಕಾಳಜಿ ಮೆಚ್ಚುವಂತದ್ದು ಎಂದರು.
ಸೂರಿಕುಮೇರಿನ ಹಳಿರ 50 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್, ಪಳ್ಳತ್ತಿಲ್ಲ 50 ಸಾ. ಲೀ ಸಾಮರ್ಥ್ಯದ ಟ್ಯಾಂಕ್, ಭರಣಿಕೆರೆ 50 ಸಾ. ಲೀ ಸಾಮರ್ಥ್ಯದ ಟ್ಯಾಂಕ್, ಮಾಣಿ ಕಾಪಿಕಾಡು ಒಂದು ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯ ನಾರಾಯಣ ಶೆಟ್ಟಿ, ನಿಕಟಪೂರ್ವ ಜಿಪಂ ಸದಸ್ಯೆ ಮಂಜುಳಾ ಮಾವೆ, ಬಿಜೆಪಿ ಕ್ಷೇತ್ರ ಕಾರ್ಯದರ್ಶಿ ಗಣೇಶ್ ರೈ, ನೇರಳಕಟ್ಟೆ ಸೊಸೈಟಿ ಅಧ್ಯಕ್ಷರಾದ ಪುಷ್ಪರಾಜ್ ಚೌಟ, ಹರೀಶ್ ಕುಲಾಲ್, ಪಂಚಾಯತ್ ಸದಸ್ಯೆ ಮಿತ್ರಾಕ್ಷಿ, ಪ್ರಮಿತ್ ಶೆಟ್ಟಿ, ಜನಾರ್ಧನ ಪೂಜಾರಿ, ನಾರಾಯಣ ಭಟ್ , ರಾಜೇಶ್ ಕುಲಾಲ್, ಉಮೇಶ್ಎಸ್.ಪಿ, ಪ್ರಜ್ವಲ್ ಯತೀಶ್ ಶೆಟ್ಟಿ, ನವೀನ್, ನೋಣಯ್ಯ ನಾಯ್ಕ, ದಿವಾಕರ ಕುಲಾಲ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಇಂಜಿನಿಯರ್ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.