ಡಾ. ಸಂದೀಪ್ ಕುಮಾರ್ ಬೋರ್ಕರ್ ನಿಧನ
![ಡಾ. ಸಂದೀಪ್ ಕುಮಾರ್ ಬೋರ್ಕರ್ ನಿಧನ ಡಾ. ಸಂದೀಪ್ ಕುಮಾರ್ ಬೋರ್ಕರ್ ನಿಧನ](https://www.varthabharati.in/sites/default/files/images/articles/2021/08/28/304345-1630129651.jpg)
ಪುತ್ತೂರು: ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಾಗಿದ್ದ ಡಾ. ಸಂದೀಪ್ ಕುಮಾರ್ ಬೋರ್ಕರ್ (51) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.
ಮೂಲತಃ ಉಡುಪಿ ಜಿಲ್ಲೆಯ ಶಿರ್ವ ಮಂಚಕಲ್ಲು ನಿವಾಸಿಯಾದ ಅವರು ಸುಮಾರು 20 ವರ್ಷಗಳಿಂದ ಪುತ್ತೂರಿನಲ್ಲಿ ಹೆಸರಾಂತ ಪ್ರಸೂತಿ ತಜ್ಜರಾಗಿ ಸೇವೆ ಸಲ್ಲಿಸುತ್ತಿದ್ದು, ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಮನೆಯಲ್ಲಿ ವಾಸವಾಗಿದ್ದರು.
ಮೃತರು ಪತ್ನಿ, ಪುತ್ರ, ಸಹೋದರ ಮೂಳೆತಜ್ಜ ಡಾ. ಪ್ರದೀಪ್ ಕುಮಾರ್ ಬೋರ್ಕರ್ ಸಹಿತ ಮೂವರು ಸಹೋದರರು, ಓರ್ವ ಸಹೋದರಿಯನ್ನು ಅಗಲಿದ್ದಾರೆ.
Next Story