ಉಳ್ಳಾಲ ದರ್ಗಾ ವತಿಯಿಂದ ಲಸಿಕೆ ಕಾರ್ಯಕ್ರಮ
![ಉಳ್ಳಾಲ ದರ್ಗಾ ವತಿಯಿಂದ ಲಸಿಕೆ ಕಾರ್ಯಕ್ರಮ ಉಳ್ಳಾಲ ದರ್ಗಾ ವತಿಯಿಂದ ಲಸಿಕೆ ಕಾರ್ಯಕ್ರಮ](https://www.varthabharati.in/sites/default/files/images/articles/2021/09/1/304841-1630493379.jpeg)
ಉಳ್ಳಾಲ : ಉಳ್ಳಾಲ ಜುಮ್ಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ಇದರ ಆಶ್ರಯದಲ್ಲಿ ದ.ಕ.ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಕೇಂದ್ರ, ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರ ಇದರ ಸಹಯೋಗದೊಂದಿಗೆ ಶಾಸಕ ಖಾದರ್ ಸಹಕಾರದಲ್ಲಿ ಉಚಿತ ಲಸಿಕೆ ವಿತರಣಾ ಕಾರ್ಯಕ್ರಮ ದರ್ಗಾ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ವಹಿಸಿದ್ದರು. ಈ ಸಂದರ್ಭ ದರ್ಗಾ ವಠಾರದಲ್ಲಿರುವ ಒಟ್ಟು 696 ಮಂದಿಗೆ ಲಸಿಕೆ ನೀಡಲಾಯಿತು.
ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಬಾವಾ ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ತ್ವಾಹಾ ಮುಹಮ್ಮದ್, ಜೊತೆ ಕಾರ್ಯ ದರ್ಶಿ ನೌಶಾದ್ ಅಲಿ, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಸದಸ್ಯ ರಾದ ಆಸೀಫ್ ಅಬ್ದುಲ್ಲಾ, ಇಬ್ರಾಹಿಂ ಹಾಜಿ, ಮುಸ್ತಫಾ ಅಬ್ದುಲ್ಲಾ, ಫಾರೂಕ್ ಉಳ್ಳಾಲ್, ಖಲೀಲ್, ಎ.ಕೆ.ಮೊಯ್ದಿನ್ ಹಾಜಿ, ಹಸೈನಾರ್, ನಝೀರ್, ಮೊಯ್ದಿನಬ್ಬ, ಇಬ್ರಾಹಿಂ ಅಳೇಕಲ, ಜಮಾಲ್ ಮೇಲಂಗಡಿ ಮೊದಲಾದವರು ಉಪಸ್ಥಿತರಿದ್ದರು.
Next Story