Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಉತ್ತರ ಶ್ರೀಲಂಕಾದಲ್ಲೂ ಚೀನಾದ ಚಟುವಟಿಕೆ:...

ಉತ್ತರ ಶ್ರೀಲಂಕಾದಲ್ಲೂ ಚೀನಾದ ಚಟುವಟಿಕೆ: ಭಾರತಕ್ಕೆ ಆತಂಕ

ವಾರ್ತಾಭಾರತಿವಾರ್ತಾಭಾರತಿ1 Sept 2021 9:29 PM IST
share
ಉತ್ತರ ಶ್ರೀಲಂಕಾದಲ್ಲೂ ಚೀನಾದ ಚಟುವಟಿಕೆ: ಭಾರತಕ್ಕೆ ಆತಂಕ

ಹೊಸದಿಲ್ಲಿ,ಸೆ.1: ಮೂಲಸೌಕರ್ಯಗಳ ಯೋಜನೆಗಳ ಸೋಗಿನಲ್ಲಿ ಉತ್ತರ ಶ್ರೀಲಂಕಾದಲ್ಲಿ ತನ್ನ ಹೆಜ್ಜೆಗಳನ್ನು ವಿಸ್ತರಿಸಲು ಹೊಸ ಪ್ರಯತ್ನಗಳನ್ನು ಮಾಡುತ್ತಿರುವ ಚೀನಾದ ನಡೆಗಳನ್ನು ಭಾರತ ಆತಂಕದಿಂದಲೇ ಗಮನಿಸುತ್ತಿದೆ ಎಂದು ಟಿಎನ್ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ.

ತನ್ನ ಸುಲಿಗೆಕೋರತನದ ಸಾಲ ನೀತಿಗಳ ಮೂಲಕ ಚೀನಾವು ಶ್ರೀಲಂಕಾದೊಳಗೆ ವ್ಯೆಹಾತ್ಮಕವಾಗಿ ನುಸುಳುತ್ತಿದೆ. ಈ ದ್ವೀಪರಾಷ್ಟ್ರದಲ್ಲಿ ಚೀನಾವು ಸಾಧ್ಯವಿದ್ದಷ್ಚು ಮಟ್ಟಿಗೆ ಭಾರತದ ಕರಾವಳಿಯ ಸಮೀಪದಲ್ಲಿಯೇ ತನ್ನ ಉಪಸ್ಥಿತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದೆ ಎಂದು ವರದಿ ಹೇಳಿದೆ.
  
‘‘ಚೀನಾದ ಆರ್ಥಿಕ ಚಟುವಟಿಕೆಗಳ ಪಸರಣೆ ಹಾಗೂ ಶ್ರೀಲಂಕಾದ ಉತ್ತರಪ್ರಾಂತದಲ್ಲಿ ಪ್ರಸ್ತಾವಿತ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಚೀನಾವು ಮುಂದಿನ ಹಂತಗಳಲ್ಲಿ ವ್ಯೆಹಾತ್ಮಕ ಕಾರಣಗಳಿಗಾಗಿ ಬಳಸಿಕೊಳ್ಳಲಿದ್ದು, ಖಂಡಿತವಾಗಿಯೂ ಇದು ಭಾರತಕ್ಕೆ ಕಳವಳಕಾರಿಯಾಗಲಿದೆ’’ ಎಂದು ಭಾರತ ಸರಕಾರದ ಉನ್ನತ ಮೂಲಗಳ ಹೇಳಿಕೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
 
ಈ ಮೊದಲು ಚೀನಿ ಯೋಜನೆಗಳು ಬಹುತೇಕವಾಗಿ ದಕ್ಷಿಣ ಶ್ರೀಲಂಕಾಕ್ಕೆ ಸೀಮಿತವಾಗಿದ್ದವು. ಆದರೆ ಗೋಟಬಯಾ ರಾಜಪಕ್ಷ ಸರಕಾರವು ಉತ್ತರ ಶ್ರೀಲಂಕಾದಲ್ಲಿಯೂ ಹಲವಾರು ಚೀನಿ ಉದ್ಯಮಗಳಿಗೆ ಅವಕಾಶ ನೀಡುತ್ತಿದ್ದು, ಸ್ಥಳೀಯ ಜನಾಂಗೀಯ ತಮಿಳರ ಭಾವನೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ಬೆಳವಣಿಗೆಗಳನ್ನು ಭಾರತವು ನಿಕಟವಾಗಿ ಗಮನಿಸುತ್ತಿದೆ ಎಂದು ಉನ್ನತ ರಾಜತಾಂತ್ರಿಕರೊಬ್ಬರು ತಿಳಿಸಿದ್ದಾರೆ.
 
ಜಾಫ್ನಾ ಪರ್ಯಾಯದ್ವೀಪದ ಕರಾವಳಿಯ ಸಮೀಪದಲ್ಲಿರುವ ಮೂರು ನಡುಗಡ್ಡೆಗಳಲ್ಲಿ 12 ದಶಲಕ್ಷ ಡಾಲರ್ ಮೊತ್ತದ ಹೈಬ್ರಿಡ್ ಗಾಳಿ ಹಾಗೂ ಸೌರ ಇಂಧನ ಯೋಜನೆಯನ್ನು    ಚೀನಾದ ಸಿನೋಸಾರ್-ಇಟೆಕ್ವಿನ್ ಜಂಟಿ ಉದ್ಯಮಸಂಸ್ಥೆಗೆ ನೀಡುವ ಶ್ರೀಲಂಕಾ ಸರಕಾರದ ನಿರ್ಧಾರಕ್ಕೆ ಭಾರತ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು. ತಮಿಳುನಾಡು ಕರಾವಳಿಯಿಂದ ಕೇವಲ 50 ಕಿ.ಮೀ. ದೂರದಲ್ಲಿರುವ ಈ ನಡುಗಡ್ಡೆಗಳು ಆಯಕಟ್ಟಿನ ದೃಷ್ಟಿಯಿಂದ ಮಹತ್ವವುಳ್ಳದ್ದಾಗಿರುವುದರಿಂದ ಭಾರತವು ಈ ಯೋಜನೆಗಳ ನಿರ್ಮಾಣಕ್ಕೆ 12 ದಶಲಕ್ಷ ಡಾಲರ್ಗಳ ಅನುದಾನ ನೀಡುವ ಕೊಡುಗೆಯನ್ನು ಶ್ರೀಲಂಕಾಗೆ ನೀಡಿತ್ತು.
   
ಸ್ಥಳೀಯ ರೈತರ ಪ್ರತಿಭಟನೆಯ ಹೊರತಾಗಿಯೂ ಇನ್ನೊಂದು ಚೀನಿ ಜಂಟಿ ಉದ್ಯಮಸಂಸ್ಥೆಗೆ ಉತ್ತರ ಶ್ರೀಲಂಕಾದ ಕರಾವಳಿ ಗ್ರಾಮದಲ್ಲಿ ‘ಕುಕುಂಬರ್’ ಮೀನಿನ ಕೃಷಿಗೆ ಅನುಮೋದನೆ ನೀಡಿದೆ. ಚೀನಾವು ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸುತ್ತಿರುವುದನ್ನು ಭಾರತ ಗಮನಿಸುತ್ತಿದೆಯೆಂದು ಉನ್ನತ ಮೂಲಗಳು ತಿಳಿಸಿವೆ.
   
ಜಪಾನ್ ಜೊತೆಗೂಡಿ ಕೊಲಂಬೊದ ಬಂದರಿನಲ್ಲಿ ಈಸ್ಟ್ ಕಂಟೈನರ್ ಟರ್ಮಿನಲ್ ಅನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವ ತ್ರಿಪಕ್ಷೀಯ ಒಪ್ಪಂದದಿಂದ ಹಿಂದೆ ಸರಿದಿರುವುದಕ್ಕಾಗಿ ಶ್ರೀಲಂಕಾದ ಬಗ್ಗೆ ಭಾರತಕ್ಕೆ ಅಸಮಾಧಾನವುಂಚಾಗಿದೆ. ಟ್ರಿಂಕಾಮಲಿಯಲ್ಲಿರುವ ತೈಲ ಟ್ಯಾಂಕ್ಗಳ ಯೋಜನೆಯ ಬಗೆಗೂ ಶ್ರೀಲಂಕಾದೊಂದಿಗೆ ಭಿನ್ನಮತವುಂಟಾಗಿದೆ ಎಂದು ಮೂಲಗಳು ಹೇಳಿವೆ.
  
ಆದರೆ ಚೀನಾವು ಇದನ್ನೇ ಸದವಕಾಶವಾಗಿ ಬಳಸಿಕೊಳ್ಳುತ್ತಿದೆ. ನೂತನ ಕೊಲಂಬೊ ಬಂದರು ನಗರ ಯೋಜನೆಯಡಿ ಹಂಬನ್ಟೋಟಾ ಬಂದರನ್ನು 99 ವರ್ಷಗಳ ಲೀಸ್ಗೆ ಪಡೆದುಕೊಂಡಿದೆ. ಶ್ರೀಲಂಕಾದಲ್ಲಿ ಮಾತ್ರವಲ್ಲದೆ ಸಮಗ್ರ ಹಿಂದೂ ಮಹಾಸಾಗರ ಪ್ರಾಂತದಲ್ಲಿಯೂ ಚೀನಾವು ಸೆಶೆಲ್ಸ್, ಮಾರಿಶಸ್, ಮಾಲ್ದೀವ್ಸ್, ಬಾಂಗ್ಲಾ, ಮ್ಯಾನ್ಮಾರ್ ಹಾಗೂ ಪೂವ ಆಫ್ರಿಕದ ರಾಷ್ಟ್ರಗಳನ್ನು ತನ್ನ ರೆಕ್ಕೆಗಳನ್ನು ವ್ಯವಸ್ಥಿತವಾಗಿ ವಿಸ್ತರಿಸುತ್ತಿದೆ ಎಂದು ವರದಿ ಹೇಳಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X