ವೀರಪ್ಪ ಮೊಯ್ಲಿ ನೇಮಕ
![ವೀರಪ್ಪ ಮೊಯ್ಲಿ ನೇಮಕ ವೀರಪ್ಪ ಮೊಯ್ಲಿ ನೇಮಕ](https://www.varthabharati.in/sites/default/files/images/articles/2021/09/4/305300-1630767571.jpg)
ಮಂಗಳೂರು, ಸೆ.4: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಸೋನಿಯಾ ಗಾಂಧಿಯ ಶಿಫಾರಸ್ಸಿನ ಮೇರೆಗೆ ಜಾತಿ ಗಣತಿಗೆ ಸಂಬಂಧಿಸಿದ ವಿಷಯಗಳನ್ನು ಅಧ್ಯಯನ ಮಾಡುವ ನೂತನ ಸಮಿತಿಯ ಸಂಚಾಲಕರನ್ನಾಗಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪವೊಯ್ಲಿ ನೇಮಕಗೊಳಿಸಲಾಗಿದೆ.
ಈ ಸಮಿತಿಯ ಸದಸ್ಯರನ್ನಾಗಿ ಅಭಿಷೇಕ್ ಮನು ಸಿಂಘ್ವಿ, ಸಲ್ಮಾನ್ ಖುರ್ಶಿದ್, ಮೋಹನ್ ಪ್ರಕಾಶ್, ಆರ್.ಪಿ.ಎನ್ ಸಿಂಗ್, ಪಿ.ಎಲ್. ಪುನಿಯಾ, ಕುಲ್ದೀಪ್ ಬಿಶೋನಿ ಅವರನ್ನು ನೇಮಿಸಲಾಗಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story