ಉಡುಪಿ ಜಿಲ್ಲೆಯಲ್ಲಿ 2 ದಿನ ಸಚಿವ ಸುನೀಲ್ ಕುಮಾರ್ ಪ್ರವಾಸ

ಉಡುಪಿ, ಸೆ.4: ರಾಜ್ಯದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅವರು ಸೆ.5 ಮತ್ತು 6ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಸೆ.5ರಂದು ಬೆಳಗ್ಗೆ 9 ಗಂಟೆಗೆ ಸಾಣೂರುನಲ್ಲಿ ಮೆಸ್ಕಾಂ ಮಾದರಿ ಗ್ರಾಮ ಉದ್ಘಾಟನೆ, 10ಕ್ಕೆ ಉಡುಪಿ ಸೈಂಟ್ ಸಿಸಿಲಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ, 11:30ಕ್ಕೆ ಕಾರ್ಕಳ ತಾಪಂನಲ್ಲಿ ತಾಲೂಕು ಮಟ್ಟದ ಅಧಿಕಾರಿ ಗಳೊಂದಿಗೆ ಸಭೆ, ಅಪರಾಹ್ನ 1:00ಕ್ಕೆ ಹಿರಿಯಂಗಡಿ ಬಾಲಾಜಿ ಅಯ್ಯಪ್ಪ ಶಿಬಿರಕ್ಕೆ ಭೇಟಿ, 2:30ಕ್ಕೆ ಕಾರ್ಕಳದ ಅಂಡಾರು ವಿಠಲ ಶೆಟ್ಟಿ ರುಕ್ಮಿಣಿ ಕಿಣಿ ಸಭಾ ಭವನ ದಲ್ಲಿ ನಡೆಯುವ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, 3:45ರಿಂದ 5 ರವರೆಗೆ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕಾರ್ಕಳ ಮತ್ತು ಹೆಬ್ರಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ.
ಸೆ.6ರಂದು ಬೆಳಗ್ಗೆ 7 ಕ್ಕೆ ಕೊಲ್ಲೂರು ದೇವಾಲಯ ಭೇಟಿ, 9 ಕ್ಕೆ ಬೈಂದೂರು- ಗೋಳಿಹೊಳೆ ಗ್ರಾಪಂನ ಯಳಜಿತ್ ಗ್ರಾಮದ ಬೂತ್ ಅಧ್ಯಕ್ಷರ ಮನೆಯಲ್ಲಿ ನಾಮಫಲಕ ಅಳವಡಿಕೆ, 9:30ರಿಂದ 10:30 ಬೈಂದೂರು ಬಿಜೆಪಿ ಕಚೇರಿ ಭೇಟಿ, ಅಪರಾಹ್ನ 12:30ರಿಂದ 1:30ರವರೆಗೆ ಕಾರ್ಕಳ ವಿಕಾಸ ಕಚೇರಿ ಯಲ್ಲಿ ಬಿಳ ಬೆಂಡೆ ಮೇಳ ಬಳಿಕ ಮಂಗಳೂರಿಗೆ ತೆರಳುವರು.





