Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಪಂಜ್ಶೀರ್ ನಲ್ಲಿ ಮುಂದುವರಿದ ಭೀಕರ...

ಪಂಜ್ಶೀರ್ ನಲ್ಲಿ ಮುಂದುವರಿದ ಭೀಕರ ಸಂಘರ್ಷ

ವಾರ್ತಾಭಾರತಿವಾರ್ತಾಭಾರತಿ4 Sept 2021 11:27 PM IST
share

ಕಾಬೂಲ್,ಸೆ.5: ತಾಲಿಬಾನ್ ಹಾಗೂ ರಾಷ್ಟ್ರೀಯ ಪ್ರತಿರೋಧ ರಂಗ (ಎನ್ಆರ್ಎಫ್) ಪಡೆಗಳನಡುವೆ ಪಂಜಶೀರ್ ಕಣಿವೆಯಲ್ಲಿ ಶನಿವಾರ ಮತ್ತೆ ಭೀಕರ ಕಾಳಗ ನಡೆದಿರುವುದಾಗಿ ವರದಿಯಾಗಿದೆ.

  ತಾಲಿಬಾನ್ ಪಡೆಗಳು ಕಪಿಸಾ ಪ್ರಾಂತ ಹಾಗೂ ಪಂಜ್ಶೀರ್ ಪ್ರಾಂತದ ಗಡಿಯಲ್ಲಿರುವ ದರ್ಬಾಂದ್ ಬೆಟ್ಟಶ್ರೇಣಿಗಳನ್ನು ತಲುಪಿವೆಯಾದರೂ , ಅವುಳನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ರಂಗ (ಎನ್ಆರ್ಎಫ್)ದ ವಕ್ತಾರರೊಬ್ಬರು ತಿಳಿಸಿದ್ದಾರೆ.

 ಈ ಮಧ್ಯೆ ಪಂಜ್ಶೀರ್ನಲ್ಲಿ ಕದನ ಮುಂದುವರಿದಿರುವುದಾಗಿ ತಾಲಿಬಾನ್ ತಿಳಿಸಿದೆ. ಆದರೆ ಅಲ್ಲಿನ ರಾಜಧಾನಿ ಬಾಝರಾಕ್ಗೆ ಸಾಗುವ ರಸ್ತೆಯಲ್ಲಿ ಹಾಗೂ ಪ್ರಾಂತೀಯ ಗವರ್ನರ್ ಅವರ ಕಾರ್ಯಾಲಯದ ಆವರಣದಲ್ಲಿ ನೆಲಬಾಂಬ್ಗಳನ್ನು ಇರಿಸಿರುವುದರಿಂದ ತನ್ನ ಪಡೆಗಳ ಮುನ್ನಡೆಯು ಕುಂಠಿತಗೊಂಡಿರುವುದಾಗಿ ಅದು ಹೇಳಿದೆ. 

ಆಡಳಿತ ಚುಕ್ಕಾಣಿಯನ್ನು ಹಿಡಿಯುವ ಮುನ್ನ ಪಂಜ್ಶೀರ್ ಪ್ರಾಂತವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ತಾಲಿಬಾನ್ ಭಾರೀ ಪ್ರಯತ್ನ ನಡೆಸುತ್ತಿದೆ.

ನೆಲ ಬಾಂಬ್ ಗಳನ್ನು ತೆಗೆದುಹಾಕುವ ಹಾಗೂ ಆಕ್ರಮಣವನ್ನು ಮುಂದುವರಿಸುವ ಕೆಲಸಗಳು ಏಕಕಾಲದಲ್ಲಿ ನಡೆಯುತ್ತಿರುವುದಾಗಿ ಅದು ಹೇಳಿದೆ.

ಸೋವಿಯತ್ ಒಕ್ಕೂಟದ ಆಕ್ರಮಣವನ್ನು ದಶಕಕ್ಕೂ ಹೆಚ್ಚು ಸಮಯದವರೆಗೆ ಹಾಗೂ 1996ರಿಂದ 2001ರವರೆಗೆ ತಾಲಿಬಾನ್ ನ ಆಳ್ವಿಕೆಯ ಅವಧಿಯಲ್ಲಿ ತನ್ನ ಮೇಲಿನ ಆಕ್ರಮಣವನ್ನು ತಡೆಯುವಲ್ಲಿ ಪಂಜ್ಶೀರ್ ಪಡೆಗಳು ಯಶಸ್ವಿಯಾಗಿದ್ದವು. 

ತಾಲಿಬಾನ್ ವಿರೋಧಿ ಪಡೆಗಳಾದ ತಥಾಕಥಿತ ರಾಷ್ಟ್ರೀಯ ಪ್ರತಿರೋಧ ರಂಗ (ಎನ್ಆರ್ಎಫ್)ದ ಸೈನಿಕರು ಕಣಿವೆಯಲ್ಲಿ ಅಪಾರಪ್ರಮಾಣ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿಟ್ಟಿದ್ದು, ಭಾರೀ ಸವಾಲು ಒಡ್ಡಿದ್ದಾರೆನ್ನಲಾಗಿದೆ. ಕಾಬೂಲ್ ನಿಂದ 80 ಕಿ.ಮೀ. ಉತ್ತರದಲ್ಲಿರುವ ಪಂಜ್ಶೀರ್ ಕಣಿವೆಯುವ ಕಡಿದಾದ ಕಂದಕ ಮಾರ್ಗದ ಮಾತ್ರವೇ ಸಂಪರ್ಕಿಸಬಹುದಾಗಿರುವುದರಿಂದ ಅದು ಅಭೇದ್ಯವಾಗಿಯೇ ಉಳಿದಿದೆಯೆನ್ನಲಾಗಿದೆ.

 ಪಂಜ್ಶೀರ್ನಲ್ಲಿ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಹಾಗೂ ತಾಲಿಬಾನ್ವಿರೋಧಿ ಹೋರಾಟಗಾರ ದಿ.ಅಹ್ಮದ್ ಶಾ ಮಸ್ಸೂದ್ ಅವರ ಪುತ್ರ ಅಹ್ಮದ್ ಮಸ್ಸೂದ್ ಸಂಘರ್ಷವನ್ನು ಮುನ್ನಡೆಸುತ್ತಿದ್ದಾರೆ. ತಾಲಿಬಾನ್ನ ಆಕ್ರಮಣದಿಂದಾಗಿ ಎನ್ಆರ್ಎಫ್ ಅತ್ಯಂತ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿರುವುದನ್ನು ಮಸೂದ್ ಒಪ್ಪಿಕೊಂಡಿದ್ದಾರೆ.

‘‘ ಪರಿಸ್ಥಿತಿ ಅತ್ಯಂತ ಕಠಿಣಕರವಾಗಿದೆ. ನಾವು ಆಕ್ರಮಣಕ್ಕೊಳಗಾಗಿದ್ದೇ ಎಂದು ಸಲೇಹ್ ವಿಡಿಯೋ ಸಂದೇಶವೊಂದರಲ್ಲಿ ತಿಳಿಸಿದ್ದಾರೆ. ಆದಾಗ್ಯೂನಮ್ಮ ಪ್ರತಿರೋಧವು ಮುಂದುವರಿಯಲಿದೆ ’’ ಎಂದವರು ಘೋಷಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X