ಭಾವಾನುವಾದ, ಫಲಶೃತಿಯನ್ನೊಗೊಂಡ ಪುಸ್ತಕ ಬಿಡುಗಡೆ
![ಭಾವಾನುವಾದ, ಫಲಶೃತಿಯನ್ನೊಗೊಂಡ ಪುಸ್ತಕ ಬಿಡುಗಡೆ ಭಾವಾನುವಾದ, ಫಲಶೃತಿಯನ್ನೊಗೊಂಡ ಪುಸ್ತಕ ಬಿಡುಗಡೆ](https://www.varthabharati.in/sites/default/files/images/articles/2021/09/6/305513-1630929556.jpg)
ಉಡುಪಿ, ಸೆ.6: ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಪ್ರಕಾಶನದಲ್ಲಿ ಶೈಲಜಾ ಸದಾಶಿವ ಅಡಿಗ ಅವರ ಭಗವದ್ಗೀತೆ, ವಿಷ್ಣು ಸಹಸ್ರನಾಮ, ಭೀಷ್ಮಸ್ತವ ರಾಜ, ಗಜೇಂದ್ರ ಮೋಕ್ಷ ಹಾಗೂ ಅನುಸ್ಮೃತಿಯ ಭಾವಾನುವಾದ ಹಾಗೂ ಫಲಶೃತಿ ಯನ್ನು ಒಳಗೊಂಡ ಪುಸ್ತಕವು ರವಿವಾರ ಕೋಟದ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬಿಡುಗಡೆಗೊಂಡಿತು.
ಯೋಗ ಗುರು ವಿದ್ವಾನ್ ಡಾವಿಜಯಕುಮಾರ್ ಮಂಜರ್ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಗುಂಡ್ಮಿ ಶಂಕರನಾರಾಯಣ ಅಡಿಗರು ಕೃತಿ ಪರಿಚಯ ಮಾಡಿದರು. ಸಂಸ್ಕೃತಿ ಪ್ರತಿಷ್ಠಾನ ಗೌರವಾಧ್ಯಕ್ಷ ಯು.ವಿಶ್ವನಾಥ ಶೆಣೈ, ವಾಸು ದೇವಾಚಾರ್ಯ, ಪಶುಪತಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್, ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ್ ಭಟ್ ಮೊದ ಲಾದವರು ಉಪಸ್ಥಿತರಿದ್ದರು.
ಶೈಲಾ ಅಡಿಗ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಷ್ಠಾನದ ಉಪಾಧ್ಯಕ್ಷ ವಿಘ್ನೇಶ್ವರ ಅಡಿಗ ಕಾರ್ಯಕ್ರಮ ನಿರೂಪಿಸಿದರು.
Next Story