ಸ್ಮಾರ್ಟ್ ಸಿಟಿ ಸಮಸ್ಯೆ ಅಧ್ಯಯನಕ್ಕೆ ಸಮನ್ವಯ ತಂಡ: ಮೇಯರ್
ಮಂಗಳೂರು, ಸೆ. 6: ಮಂಗಳೂರು ನಗರ ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿದ್ದು, ಇಲ್ಲಿನ ಪುಟ್ಪಾತ್, ಪಾರ್ಕಿಂಗ್, ಬೀದಿ ಬದಿ ವ್ಯಾಪಾರ ಸೇರಿದಂತೆ ನಾನಾ ಸಮಸ್ಯೆ ಕುರಿತಾಗಿ ಅಧ್ಯಯನಕ್ಕಾಗಿ ಮಹಾನಗರ ಪಾಲಿಕೆ ಎಕ್ಸಿಕ್ಯೂಟಿವ್ ಎಂಜಿನಿಯರ್ ನೇತೃತ್ವದ ಸಮನ್ವಯ ತಂಡವೊಂದನ್ನು ರಚಿಸಿ, ಅದರ ವರದಿ ಆಧಾರದಲ್ಲಿ ಕ್ರಮ ವಹಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯೊಳಗಿನ ಸಂಚಾರ ವ್ಯವಸ್ಥೆಯ ಸಮಸ್ಯೆಗಳ ಹಾಗೂ ಸುಗಮ ಸಂಚಾರ ಸುಧಾರಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಮನಪಾ ಸ್ಮಾರ್ಟ್ ಸಿಟಿ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರಪಾಲಿಕೆ 60 ವಾರ್ಡ್ಗಳಲ್ಲಿ ಸಂಚಾರಕ್ಕೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ ಹಾಗೂ ಸಭೆಯ ಚರ್ಚೆಯ ಅನುಷ್ಠಾನಕ್ಕೆ ಗಮನಹರಿಸಲು ಮಂಗಳೂರು ಮಹಾನಗರಪಾಲಿಕೆ ಎಕ್ಸಿಕ್ಯೂಟಿವ್ ಎಂಜಿನಿಯರ್, ಕಿರಿಯ ಎಂಜಿನಿಯರ್ಗಳನ್ನು ನೇಮಿಸಲಾಗುವುದು. ಈ ಅಧಿಕಾರಿಗಳು, ಪೊಲೀಸರು ಹಾಗೂ ಇತರ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿ ನಗರದ ಸಮಸ್ಯೆಯನ್ನು ವರದಿ ಮಾಡಲಿದ್ದಾರೆ. ನಗರದಲ್ಲಿರುವ ುಟ್ಪಾತ್, ನೋ-ಪಾರ್ಕಿಂಗ್, ಪೇಯ್ಡಾ ಪಾರ್ಕಿಂಗ್ ಸರ್ವೇ, ಝೀಬ್ರಾ ಕ್ರಾಸಿಂಗ್, ಬೀದಿ ಬದಿ ವ್ಯಾಪಾರದ ಗಮನಹರಿಸಿ ನೀಡುವ ವರದಿ ಆಧಾರದಲ್ಲಿ ಮುಂದೆ ಕ್ರಮಕೈಗೊಳ್ಳಲಾಗುವುದು ಎಂದವರು ಹೇಳಿದರು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಅಕ್ಷಯ್ ಶ್ರೀಧರ್ ಮಾತನಾಡಿ, ನಗರದಲ್ಲಿ ಈ ಹಿಂದೆ ಅಪಘಾತವನ್ನು ತಪ್ಪಿಸಲು ಹಂಪ್ ನಿರ್ಮಾಣಕ್ಕೆ ಮಾಡಿದ ಸಮಿತಿ ಮಾದರಿಯಲ್ಲೇ ಎಕ್ಸಿಕ್ಯೂಟಿವ್ ನೇತೃತ್ವದ ಸಮಿತಿಯೂ ಕಾರ್ಯನಿರ್ವಹಿಸಲಿದೆ. ಆದಷ್ಟು ಶೀಘ್ರದಲ್ಲೇ ಸಭೆಯಲ್ಲಿ ಆದ ಚರ್ಚೆಯನ್ನು ಕಾರ್ಯಗತಗೊಳಿಸಲು ನಮ್ಮ ತಂಡ ಸಿದ್ಧವಿದೆ ಎಂದರು.
ಮಂಗಳೂರು ನಗರದ ಟ್ರಾಫಿಕ್ ಸಮಸ್ಯೆ, ುಟ್ಪಾತ್ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಎನ್ಐಟಿಕೆ ತಜ್ಞರನ್ನು ಕರೆಸಿ ಮುಂದಿನ 25ವರ್ಷಗಳಿಗೆ ಸಾಕಾಗುವಷ್ಟು ಮಾಸ್ಟರ್ ಪ್ಲ್ಯಾನ್ ರೂಪಿಸಿ ಎಂದು ಕಾರ್ಪೊರೇಟರ್ ಶಶಿಧರ್ ಹೆಗಡೆ ಸಲಹೆ ನೀಡಿದರು. ನಗರದ ಸರ್ವಿಸ್ ಬಸ್ಸು ನಿಲ್ದಾಣಕ್ಕೆ ಸಿಟಿ ಬಸ್ಗಳ ಸಹಿತ ಕಂಟ್ರ್ಯಾಕ್ಟ್ ಕ್ಯಾರಿಯೇಜ್, ಕೆಎಸ್ಸಾರ್ಟಿಸಿ ಬಸ್ಗಳು ಕೂಡಾ ನಿಲುಗಡೆಯಾಗುತ್ತಿದ್ದು, ಒತ್ತಡ ಹೆಚ್ಚಾಗಿದೆ ಎಂದು ಮನಪಾ ಸದಸ್ಯ ಭಾಸ್ಕರ್ ಅಭಿಪ್ರಾಯಿಸಿದರು.
ಸದಸ್ಯ ನವೀನ್ ಡಿಸೋಜಾ ಮಾತನಾಡಿ, ಸ್ಮಾರ್ಟ್ ಸಿಟಿಯಾಗಿ ಮಂಗಳೂರು ನಗರ ಸುಂದರೀಕರಣವಾಗುತ್ತಿದ್ದು, ುಟ್ಪಾತ್ಗಳು ಪಾದಚಾರಿಗಳಿಗೆ ಅನುಕೂಲವಾಗಿದೆ. ಅಗಲವಾದ ಫುಟ್ಪಾತ್ಗಳನ್ನು ವಾಹನ ಪಾರ್ಕಿಂಗ್, ಗೂಡಂಗಡಿ, ಮೊಬೈಲ್ ಕ್ಯಾಂಟೀನ್ ಅತಿಕ್ರಮಿಸಿವೆ. ಇದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗಲಿದೆ ಎಂದರು.
ನಗರದಲ್ಲಿ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಲಾಗುತ್ತಿದ್ದು, ಇವುಗಳನ್ನು ಟೋಯಿಂಗ್ ಮಾಡುವ ಬಗ್ಗೆ ಮನಪಾ ಸದಸ್ಯರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಕೋವಿಡ್ ಹಿನ್ನಲೆ ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಕಾರಣ ಸದ್ಯ ಟೋಯಿಂಗ್ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ಉಪಮೇಯರ್ ಸುಮಂಗಲಾ ರಾವ್, ನಗರ ಅಪರಾಧ ಮತ್ತು ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತ ದಿನೇಶ್, ಉಪ ಆಯುಕ್ತ (ಕಂದಾಯ) ಬಿನಯ್, ಉಪ ಆಯುಕ್ತರು (ಆಡಳಿತ) ಅಜಿತ್ ಎಂ. ಉಪಸ್ಥಿತರಿದ್ದರು.
ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ನಟರಾಜ್, ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಭಟ್, ಕಾರ್ಪೊರೇಟರ್ಗಳಾದ ಸುೀರ್ ಶೆಟ್ಟಿಘಿ, ಕಿರಣ್ ಕೋಡಿಕಲ್, ಪೂರ್ಣಿಮಾ, ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್ ಸಲಹೆ-ಸೂಚನೆ ನೀಡಿದರು.